ಕರ್ನಾಟಕ

karnataka

ETV Bharat / bharat

ಪಾಕ್​ ದಾಳಿಯಿಂದ ಹುತಾತ್ಮರಾದ ಸೈನಿಕರ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ - ಹುತಾತ್ಮ ಜವಾನ್ಸ್ ರಿಷಿಕೇಶ್ ಜೋಂಧಲೆ

ಪಾಕಿಸ್ತಾನದ ಉದ್ಧಟತನದಿಂದ ಹುತಾತ್ಮರಾದ ಜವಾನ್ಸ್ ರಿಷಿಕೇಶ್ ಜೋಂಧಲೆ ಮತ್ತು ಭೂಷಣ್ ಸತೈ ಅವರ ಅಂತಿಮ ವಿಧಿ ವಿಧಾನಗಳನ್ನು ಅವರ ಹುಟ್ಟೂರಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

Last rites of slain soldiers performed with state honours
ಸ್ವ ಗ್ರಾಮದಲ್ಲಿ ನೇರವೇರಿದ ಪಾಕ್​ ದಾಳಿಗೆ ಬಲಿಯಾದ ಭಾರತೀಯ ಸೈನಿಕರ ಅಂತಿಮ ವಿಧಿ ವಿಧಾನಗಳು

By

Published : Nov 17, 2020, 10:23 AM IST

ಮುಂಬೈ (ಮಹಾರಾಷ್ಟ್ರ): ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ ಪರಿಣಾಮ ಭಾರತೀಯ ಸೇನೆಯ ನಾಲ್ವರು ಸೈನಿಕರು, ಬಿಎಸ್ಎಫ್ ಜವಾನ್ ಮತ್ತು ಆರು ಮಂದಿ ನಾಗರಿಕರು ಬಲಿಯಾಗಿದ್ದಾರು.

ಹುತಾತ್ಮರಾದ ರಿಷಿಕೇಶ್ ಜೋಂಧಲೆ ಮತ್ತು ಭೂಷಣ್ ಸತೈ ಅವರ ಅಂತಿಮ ವಿಧಿ ವಿಧಾನಗಳನ್ನು ಅವರ ಹುಟ್ಟೂರಿನಲ್ಲಿ ಸಕಲ ಗೌರವಗಳೊಂದಿಗೆ ನಡೆಸಲಾಯಿತು.

ಪಾಕ್​ ಉದ್ಧಟತನಕ್ಕೆ ಬಲಿಯಾದ ಜವಾನ್ ಭೂಸ್ನಾನ್ ಸತೈ ಅವರ ಅಂತಿಮ ವಿಧಿ ವಿಧಾನಗಳನ್ನು ಅವರ ಹುಟ್ಟೂರಿನಲ್ಲಿ ನೆರವೇರಿಸಲಾಯಿತು. ಅವರ ಪಾರ್ಥಿವ ಶರೀರವನ್ನು ಭಾನುವಾರ ರಾತ್ರಿ ವಿಶೇಷ ವಿಮಾನದಿಂದ ನಾಗ್ಪುರಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಗೃಹ ಸಚಿವ ಅನಿಲ್ ದೇಶಮುಖ್, ಸುನಿಲ್ ಕೇದಾರ್ ಮತ್ತು ಸಚಿವ ನಿತಿನ್ ರೌವುತ್ ಉಪಸ್ಥಿತರಿದ್ದರು.

ಹುತಾತ್ಮ ರಿಷಿಕೇಶ ಜೊಂಡಲೆ ಅವರ ಅಂತಿಮ ವಿಧಿ-ವಿಧಾನಗಳನ್ನು ಕೊಲ್ಲಾಪುರದ ಬಹಿರೇವಾಡಿಯಲ್ಲಿ ಪೂರ್ಣ ಮಿಲಿಟರಿ ಗೌರವಗಳೊಂದಿಗೆ ನಡೆಸಲಾಯಿತು.

ABOUT THE AUTHOR

...view details