ಕರ್ನಾಟಕ

karnataka

1 ರೂಪಾಯಿ ಲೋನ್‌ ಪಡೆಯದವನಿಗೆ ಬ್ಯಾಂಕ್‌ನಿಂದ ಬಂತು 50 ಕೋಟಿ ರೂ ಸಾಲದ ನೋಟಿಸ್‌!

ಕೋವಿಡ್​ನಿಂದಾಗಿ ದೇಶದಲ್ಲಿ ಸಾಮಾನ್ಯ ಜನರ ಪರಿಸ್ಥಿತಿ ತೀವ್ರ ಸ್ವರೂಪದಲ್ಲಿ ತೊಂದರೆಗೆ ಸಿಲುಕಿದೆ. ಪರಿಸ್ಥಿತಿ ಹೀಗಿರಬೇಕಾದರೆ ಜೀವನೋಪಾಯಕ್ಕಾಗಿ ಟೀ ಮಾರಾಟಗಾರನೊಬ್ಬ ಬ್ಯಾಂಕ್​​ನಿಂದ ಸಾಲ ಪಡೆದುಕೊಳ್ಳಲು ಹೋಗಿದ್ದಾನೆ. ಆದ್ರೆ ಅಲ್ಲಾಗಿದ್ದೇ ಬೇರೆ.

By

Published : Jul 23, 2020, 2:57 PM IST

Published : Jul 23, 2020, 2:57 PM IST

tea seller from Haryana
tea seller from Haryana

ಕುರುಕ್ಷೇತ್ರ (ಚಂಡೀಗಢ):ಕುರುಕ್ಷೇತ್ರದಲ್ಲಿ ಟೀ ಶಾಪ್​ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿರುವ ರಾಜಕುಮಾರ್​ ಎಂಬಾತ, ಸಾಲ ಪಡೆದುಕೊಳ್ಳುವ ಉದ್ದೇಶದಿಂದ ಬ್ಯಾಂಕ್​​ ಮೊರೆ ಹೋಗಿದ್ದ. ಆದರೆ ಈತನ ಅರ್ಜಿ ತಿರಸ್ಕರಿಸಿರುವ ಬ್ಯಾಂಕ್​ ಬರೋಬ್ಬರಿ 50 ಕೋಟಿ ರೂ. ನೋಟಿಸ್​ ನೀಡಿ ಶಾಕ್​ ಕೊಟ್ಟಿದೆ.

ನೀವು ಈಗಾಗಲೇ ಬ್ಯಾಂಕ್​​ನಿಂದ 50 ಕೋಟಿ ರೂ ಸಾಲ ಪಡೆದುಕೊಂಡಿದ್ದೀರಿ. ಇದೀಗ ಮತ್ತೊಮ್ಮೆ ಸಾಲ ಮಂಜೂರು ಮಾಡಲು ಸಾಧ್ಯವಿಲ್ಲ ಎಂದಿದೆ. ವಿಚಿತ್ರ ಅಂದ್ರೆ, ಬ್ಯಾಂಕ್​ನಿಂದ ರಾಜ್​ಕುಮಾರ್​ ಒಂದೇ ಒಂದು ರೂಪಾಯಿ ಸಾಲ ಪಡೆದುಕೊಂಡಿಲ್ಲವಂತೆ!.

ಕೋವಿಡ್​ ಕಾರಣ ಹೆಚ್ಚು ಜನರು ಟೀ ಸೇವಿಸಲು ಅಂಗಡಿಗೆ ಬರುತ್ತಿಲ್ಲ. ವ್ಯಾಪಾರ ಸಂಪೂರ್ಣವಾಗಿ ಕುಸಿತಗೊಂಡಿದೆ. ಹೀಗಾಗಿ ಕುಟುಂಬ ನಿರ್ವಹಣೆಗೋಸ್ಕರ ಹಾಗೂ ಹಣಕಾಸಿಕ ಬಿಕ್ಕಟ್ಟಿನಿಂದ ಪಾರಾಗಲು ಅವರು​ ಸಾಲದ ಮೊರೆ ಹೋಗಿದ್ದರು. ಆದ್ರೆ ಅಲ್ಲಿ ಆಗಿದ್ದೇ ಬೇರೆ!. ಬ್ಯಾಂಕ್ ಎಡವಟ್ಟಿಗೆ ಸಾಮಾನ್ಯ ಟೀ ಮಾರಾಟಗಾರ ಬೆಚ್ಚಿಬಿದ್ದಿದ್ದಾನೆ.

ABOUT THE AUTHOR

...view details