ಕರ್ನಾಟಕ

karnataka

ಕೈ ಕಾರ್ಯಕರ್ತರ ಗೂಂಡಾವರ್ತನೆ: ಫೋಟೋ ಜರ್ನಲಿಸ್ಟ್​ ಮೇಲೆ ಹಲ್ಲೆ, ವಿಡಿಯೋ ವೈರಲ್​

By

Published : Apr 7, 2019, 1:16 PM IST

ಕಾಂಗ್ರೆಸ್ ಚುನಾವಣಾ​ ಸಭೆಯಲ್ಲಿ ಕೈ ಕಾರ್ಯಕರ್ತರು ಫೋಟೋ ಜರ್ನಲಿಸ್ಟ್​​ ಮೇಲೆ ಪೌರುಷ ಪ್ರದರ್ಶಿಸಿದ್ದಾರೆ.

ಫೋಟೋ ಜರ್ನಲಿಸ್ಟ್​​ ಮೇಲೆ ಕೈ ಕಾರ್ಯಕರ್ತರ ಹಲ್ಲೆ

ಚೆನ್ನೈ: ಕಾಂಗ್ರೆಸ್ ಚುನಾವಣಾ ಸಭೆಯಲ್ಲಿ ಖುರ್ಚಿಗಳು ಖಾಲಿ ಖಾಲಿ ಇರುವ ಫೋಟೋ ತೆಗೆಯುತ್ತಿದ್ದ ಛಾಯಾಚಿತ್ರ ಪತ್ರಕರ್ತನ ಮೇಲೆ ಕೈ ಕಾರ್ಯಕರ್ತರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

ತಮಿಳು ವಾರಪತ್ರಿಕೆಯೊಂದರ ಫೋಟೋ ಜರ್ನಲಿಸ್ಟ್​​ ಆರ್​.ಎಂ. ಮುತ್ತುರಾಜ್​ ಎಂಬ ಎಂಬುವರನ್ನು ಹಿಡಿದು ಕಾಂಗ್ರೆಸ್​ ಕಾರ್ಯಕರ್ತರು ಎಳೆದಾಡಿದ್ದಾರೆ. ಹಾಗೇನೇ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಈ ದೃಶ್ಯಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಫೋಟೋ ಜರ್ನಲಿಸ್ಟ್​​ ಮೇಲೆ ಕೈ ಕಾರ್ಯಕರ್ತರ ಹಲ್ಲೆ

ತಮಿಳುನಾಡಿನ ವಿರುಧು ನಗರದಲ್ಲಿ ಕಾಂಗ್ರೆಸ್​ ನಾಯಕ ಕೆ.ಎಸ್​.ಅಳಗಿರಿ ಭಾಗವಹಿಸಿದ್ದ ಸಭೆಯಲ್ಲಿ ಬಹುಪಾಲು ಚೇರ್​ಗಳು ಖಾಲಿಯಾಗಿದ್ದವು. ಈ ದೃಶ್ಯವನ್ನು ಮುತ್ತು ರಾಜ್ ಸೆರೆಹಿಡಿಯುತ್ತಿದ್ದರು. ಈ ವೇಳೆ ಏಕಾಏಕಿ ಪತ್ರಕರ್ತನ ಮೇಲೆರಗಿದ ಕಾಂಗ್ರೆಸ್ ಕಾರ್ಯಕರ್ತರು ಮೊದಲು ಕ್ಯಾಮೆರಾ ಕಿತ್ತುಕೊಂಡು, ಹಲ್ಲೆ ನಡೆಸುತ್ತಿರುವ ದೃಶ್ಯಾವಳಿಗಳು ವಿಡಿಯೋದಲ್ಲಿದೆ. ತಕ್ಷಣ ಅಲ್ಲಿಯೇ ಇದ್ದ ಇತರ ಪತ್ರಕರ್ತರು ನೆರವಿಗೆ ಧಾವಿಸಿ ಮುತ್ತುರಾಜ್​ರನ್ನು ಅಪಾಯದಿಂದ ಕಾಪಾಡಿದರು. ಘಟನೆಯಲ್ಲಿ ಗಾಯಗೊಂಡ ಮುತ್ತುರಾಜ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಗದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು,ವಿಚಾರಣೆ ನಡೆಯುತ್ತಿದೆ.

ಈ ಘಟನೆಯನ್ನು ಬಿಜೆಪಿಯ ಎಸ್​ಜಿ ಸೂರ್ಯ ಖಂಡಿಸಿದ್ದು, ಕಾಂಗ್ರೆಸ್​ ಕಾರ್ಯಕರ್ತರನ್ನು ಗೂಂಡಾಗಳು ಎಂದು ಕರೆದಿದ್ದಾರೆ.

ABOUT THE AUTHOR

...view details