ಚೆನ್ನೈ: ತಮಿಳುನಾಡು ಸಿಎಂ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರು ಮಾಜಿ ಸಿಎಂ ಜೆ.ಜಯಲಲಿತಾ ಅವರ 'ವೇದ ನಿಲಯಂ' ನಿವಾಸವನ್ನು ಪೋಯೆಸ್ ಗಾರ್ಡನ್ನಲ್ಲಿ ಸ್ಮಾರಕವಾಗಿ ಅನಾವರಣಗೊಳಿಸಿದರು.
ಜಯಲಲಿತಾ 'ವೇದ ನಿಲಯಂ' ಸ್ಮಾರಕವಾಗಿ ಅನಾವರಣಗೊಳಿಸಿದ ಸಿಎಂ ಪಳನಿಸ್ವಾಮಿ
ತಮಿಳುನಾಡು ಮಾಜಿ ಸಿಎಂ ಜೆ.ಜಯಲಲಿತಾ ಅವರ 'ವೇದ ನಿಲಯಂ' ನಿವಾಸವನ್ನು ಪೋಯೆಸ್ ಗಾರ್ಡನ್ನಲ್ಲಿ ಸ್ಮಾರಕವಾಗಿ ಸಿಎಂ ಎಡಪ್ಪಾಡಿ ಕೆ.ಪಳನಿಸ್ವಾಮಿ ಅನಾವರಣಗೊಳಿಸಿದರು.
ಜಯಲಲಿತಾ ವೇದ ನಿಲಯಂ
ನಿನ್ನೆಯಷ್ಟೇ ಚೆನ್ನೈನ ಮರೀನಾ ಬೀಚ್ನಲ್ಲಿರುವ ಜಯಲಲಿತಾ ಅವರ ಸ್ಮಾರಕವನ್ನು ಪಳನಿಸ್ವಾಮಿ ಅವರು ಅನಾವರಣಗೊಳಿಸಿದ್ದರು. ಈ ಕಾರ್ಯಕ್ರಮಕ್ಕೆ ತಮಿಳುನಾಡಿನ ರಾಜ್ಯದ ಮೂಲೆ ಮೂಲೆಯಿಂದ ಜನರು ತಂಡೋಪ ತಂಡವಾಗಿ ಆಗಮಿಸಿದ್ದರು.
'ವೇದ ನಿಲಯಂ' ಸ್ಮಾರಕವಾಗಿ ಅನಾವರಣಗೊಳಿಸಿದ ವೇಳೆ ಉಪಮುಖ್ಯಮಂತ್ರಿ ಒ.ಪನ್ನೀರ್ಸೆಲ್ವಂ ಉಪಸ್ಥಿತರಿದ್ದರು.