ಕರ್ನಾಟಕ

karnataka

By

Published : Aug 19, 2019, 2:37 PM IST

ETV Bharat / bharat

ಕಣಿವೆ ರಾಜ್ಯ ಸ್ತಬ್ಧವಾಗಿದ್ದ ವೇಳೆ ಗಿಲಾನಿ ಟ್ವೀಟ್... ಇಬ್ಬರು ಅಧಿಕಾರಗಳ ತಲೆದಂಡ

ಆಗಸ್ಟ್ ನಾಲ್ಕರಂದು ಕಾಶ್ಮೀರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಐದರ ಮುಂಜಾನೆ ಮೆಹಬೂಬಾ ಮುಫ್ತಿ, ಒಮರ್ ಅಬ್ದುಲಾ ಸೇರಿದಂತೆ ಕೆಲ ಪ್ರಮುಖ ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿರಿಸಲಾಗಿತ್ತು. ಇಂಟರ್​ನೆಟ್​ ಸೇವೆ ಸಹ ಬಂದ್​ ಮಾಡಲಾಗಿತ್ತು. ಈ ಮಧ್ಯೆಯೂ ಗಿಲಾನಿ ಟ್ವೀಟ್​ ಮಾಡಿದ್ದು ಹೇಗೆ?

ಗಿಲಾನಿ

ಶ್ರೀನಗರ:ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯ ವೇಳೆ ರಾಜ್ಯಾದ್ಯಂತ ಸುಮಾರು ಹತ್ತು ದಿನಗಳ ಕಾಲ ಇಂಟರ್​ನೆಟ್ ಸೇವೆಯನ್ನು ಸಂಪೂರ್ಣ ಬಂದ್ ಮಾಡಲಾಗಿದ್ದರೂ, ಪ್ರತ್ಯೇಕತಾವಾದಿ ಸೈಯದ್ ಅಲಿ ಶಾ ಗಿಲಾನಿ ಈ ಅವಧಿಯಲ್ಲಿ ಇಂಟರ್​ನೆಟ್​ ಸಂಪರ್ಕ ಹೊಂದಿದ್ದರು ಎನ್ನುವ ವಿಚಾರ ತಿಳಿದು ಬಂದಿದೆ.

ಜಮ್ಮು ಕಾಶ್ಮೀರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿ 370ನೇ ವಿಧಿಯನ್ನು ರದ್ದು ಮಾಡಲಾಗಿತ್ತು. ಪರಿಸ್ಥಿತಿ ಕೈಮೀರಿ ಹೋಗಬಾರದು ಎನ್ನುವ ಕಾರಣಕ್ಕೆ ಇಂಟರ್​ನೆಟ್ ಸಂಪೂರ್ಣ ಬಂದ್​ ಇದ್ದ ನಾಲ್ಕು ದಿನ ಗಿಲಾನಿ ಇಂಟರ್​ನೆಟ್ ಬಳಸಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಬಿಎಸ್​ಎನ್​ಎಲ್​ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಕಣಿವೆ ರಾಜ್ಯದೆಲ್ಲೆಡೆ ಇಂಟರ್​ನೆಟ್ ಬಂದ್ ಆಗಿದ್ದರೂ ಹುರಿಯತ್ ಮುಖಂಡ ಸೈಯದ್ ಅಲಿ ಶಾ ಗಿಲಾನಿ ಮಾತ್ರ ಮನೆಯಲ್ಲಿ ಕುಳಿತು ಟ್ವೀಟ್ ಮಾಡುತ್ತಿದ್ದರು.

ಆಗಸ್ಟ್ ನಾಲ್ಕರಂದು ಕಾಶ್ಮೀರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಐದರ ಮುಂಜಾನೆ ಮೆಹಬೂಬಾ ಮುಫ್ತಿ, ಒಮರ್ ಅಬ್ದುಲಾ ಸೇರಿದಂತೆ ಕೆಲ ಪ್ರಮುಖ ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿರಿಸಲಾಗಿತ್ತು. ಇದನ್ನ ಗಂಭೀರವಾಗಿ ಪರಿಗಣಿಸಿದ ಸರ್ಕಾರ ಇದಕ್ಕೆ ಕಾರಣರಾದ ಅಧಿಕಾರಿಗಳ ಅಮಾನತು ಮಾಡಿ, ಸೂಕ್ತ ಕ್ರಮ ಕೈಗೊಂಡು ಬಿಸಿ ಮುಟ್ಟಿಸಿದೆ.

ABOUT THE AUTHOR

...view details