ಕರ್ನಾಟಕ

karnataka

ETV Bharat / bharat

ಎಂಎಲ್​ಸಿ ಆಗುವ ಮೂಲಕ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳಿದ ಕೆಸಿಆರ್​ ಪುತ್ರಿ - ನಿಜಾಮಾಬಾದ್ ಎಂಎಲ್​ಸಿ ಉಪಚುನಾವಣೆ 2020

2019ರ ಸಂಸತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲು ಕಂಡಿದ್ದ ಕಲ್ವಕುಂಟ್ಲಾ ಕವಿತಾ ಅವರು ಇಂದು ಹೊರ ಬಿದ್ದ ನಿಜಾಮಾಬಾದ್ ಎಂಎಲ್​ಸಿ ಉಪಚುನಾವಣಾ ಫಲಿತಾಂಶದಲ್ಲಿ ಭಾರಿ ಬಹುಮತದೊಂದಿಗೆ ಜಯ ಗಳಿಸುವ ಮೂಲಕ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳಿದ್ದಾರೆ.

KCR's daughter Kavitha secures thumping win for TRS in Nizamabad MLC Byelections
ಕಕಲ್ವಕುಂಟ್ಲಾ ಕವಿತಾ

By

Published : Oct 12, 2020, 9:53 PM IST

ಹೈದರಾಬಾದ್:ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ, ನಿಜಾಮಾಬಾದ್ ಮಾಜಿ ಸಂಸದೆ ಕಲ್ವಕುಂಟ್ಲಾ ಕವಿತಾ ಅವರು ಎಂಎಲ್​ಸಿ ಆಗಿ ಆಯ್ಕೆ ಆಗಿದ್ದಾರೆ. ಇಂದಿನ ಚುನಾವಣಾ ಫಲಿತಾಂಶದಿಂದ ಅವರು ಮತ್ತೆ ರಾಜಕೀಯಕ್ಕೆ ಕಾಲಿರಿಸಿದ್ದಾರೆ.

ನಿಜಾಮಾಬಾದ್ ಎಂಎಲ್‌ಸಿ ಸ್ಥಾನಕ್ಕೆ ಶುಕ್ರವಾದ ಚುನಾವಣೆ ನಡೆಸಲಾಗಿತ್ತು. ಇಂದು ಫಲಿತಾಂಶ ಪ್ರಕಟಗೊಂಡಿದ್ದು, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕವಿತಾ, ಭಾರಿ ಬಹುಮತದೊಂದಿಗೆ ಆಯ್ಕೆ ಆಗಿದ್ದಾರೆ. ಒಟ್ಟು 823 ರಲ್ಲಿ 728 ಮತಗಳನ್ನು ಗಳಿಸಿ ಭರ್ಜರಿ ಜಯ ಸಾಧಿಸಿದ್ದಾರೆ.

ಭಾರತೀಯ ಜನತಾ ಪಕ್ಷ (ಬಿಜೆಪಿ) 56 ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾದರೆ, ಕಾಂಗ್ರೆಸ್ ಪಕ್ಷವು ಕೇವಲ 28 ಮತಗಳನ್ನು ಪಡೆಯಲು ಶಕ್ತವಾಯಿತು. ಕವಿತಾ ಅವರು 2019 ರ ಸಂಸತ್ ಚುನಾವಣೆಯಲ್ಲಿ ತಮ್ಮ ಬಿಜೆಪಿ ಪ್ರತಿಸ್ಪರ್ಧಿ ಡಿ ಅರವಿಂದ್ ವಿರುದ್ಧ ಸೋಲು ಅನುಭವವಿಸಿದ್ದರು. ಇಂದಿನ ಉಪಚುನಾವಣೆಗಳಲ್ಲಿ ಭರ್ಜರಿ ಜಯದೊಂದಿಗೆ ಅವರು ಮತ್ತೆ ಸಕ್ರಿಯ ರಾಜಕೀಯಕ್ಕೆ ಮರಳಿದ್ದಾರೆ.

ABOUT THE AUTHOR

...view details