ಕರ್ನಾಟಕ

karnataka

ETV Bharat / bharat

ಉಸಿರಾಟ ತೊಂದರೆ: ಸ್ವಾಮಿ ಸ್ವರೂಪಾನಂದ ಆಸ್ಪತ್ರೆಗೆ ದಾಖಲು

ಉಸಿರಾಟದ ತೊಂದರೆಯಿಂದಾಗಿ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ಅವರನ್ನು ಬುಧವಾರ ಜಬಲ್ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

By

Published : Jan 24, 2020, 1:02 PM IST

swami-swaroopanand
ಸ್ವಾಮಿ ಸ್ವರೂಪಾನಂದ್

ಮಧ್ಯಪ್ರದೇಶ/ ಜಬಲ್ಪುರ್​:ಉಸಿರಾಟದ ತೊಂದರೆಯಿಂದಾಗಿ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ಅವರನ್ನು ಬುಧವಾರ ಜಬಲ್ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

96 ವರ್ಷದ ಸ್ವಾಮಿ ಸ್ವರೂಪಾನಂದ ಅವರು ಉಸಿರಾಟದ ತೊಂದರೆಯಿಂದಾಗಿ ಜನವರಿ 22 ರಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದಕ್ಕೂ ಮೊದಲು ಸ್ವರೂಪಾನಂದ ಅವರ ಶಿಷ್ಯರು ಮಧ್ಯಪ್ರದೇಶದ ಗೋಟೆಗಾಂವ್‌ನಲ್ಲಿರುವ ವೈದ್ಯರಲ್ಲಿ ಪರೀಕ್ಷಿಸಿದ್ದಾರೆ. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಜಬಲ್‌ಪುರಕ್ಕೆ ಸ್ಥಳಾಂತರಿಸಲು ತಿಳಿಸಿದ್ದಾರೆ.

ನಿನ್ನೆ ತಡರಾತ್ರಿ ನರಸಿಂಗ್‌ಪುರ ಜಿಲ್ಲೆಯ ಸಕಾಲ್ ಘಾಟ್ ಆಶ್ರಮದಲ್ಲಿ ಶಂಕರಾಚಾರ್ಯರು ವಾಸವಿದ್ದರು, ಅಲ್ಲಿ ಅವರ ಆರೋಗ್ಯ ಹದಗೆಟ್ಟಿದೆ.

ಆಸ್ಪತ್ರೆ ಮೂಲಗಳ ಪ್ರಕಾರ, ಸ್ವಾಮಿ ಶಂಕರಾಚಾರ್ಯರ ಆರೋಗ್ಯವು ಸುಧಾರಿಸುತ್ತಿದ್ದು, ಮುಂದಿನ 2 ರಿಂದ 3 ದಿನಗಳವರೆಗೆ ಅವರನ್ನು ವೀಕ್ಷಣೆಯಲ್ಲಿ ಇಡಲಾಗುವುದು ಎಂದು ತಿಳಿಸಿದ್ದಾರೆ.

ABOUT THE AUTHOR

...view details