ನವದೆಹಲಿ: ಜಮ್ಮು- ಕಾಶ್ಮೀರ ಇನ್ಮುಂದೆ ರಾಜ್ಯವಾಗಿರಲ್ಲ. ಅದೇನಿದ್ದರೂ ಕೇಂದ್ರಾಡಳಿತ ಪ್ರದೇಶವಾಗಿರಲಿದೆ.
ಇಂದು ರಾಷ್ಟ್ರಪತಿಗಳು ಜಮ್ಮು - ಕಾಶ್ಮೀರವನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದು, ಲಡಾಕ್ ಹಾಗೂ ಜಮ್ಮು- ಕಾಶ್ಮೀರ ಎರಡೂ ಕೇಂದ್ರಾಡಳಿತ ಪ್ರದೇಶಗಳಾಗಿವೆ.
ಅಷ್ಟೇ ಇಲ್ಲ ಜಮ್ಮು - ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ಹಾಗೂ ಆರ್ಟಿಕಲ್ 370 ಹಾಗೂ ಆರ್ಟಿಕಲ್ 35 ಎ ಎರಡನ್ನೂ ಕಿತ್ತುಕೊಳ್ಳಲಾಗಿದೆ.
ಕೇಂದ್ರದ ಈ ನಿರ್ಧಾರಕ್ಕೆ ರಾಷ್ಟ್ರಪತಿಗಳು ತಮ್ಮ ಆದೇಶದ ಮೂಲಕ ಅಂಕಿತ ಹಾಕಿದ್ದಾರೆ.
ಈ ನಡುವೆ ಕೇಂದ್ರದ ಬೆಂಬಲಕ್ಕೆ ಎಐಎಡಿಎಂಕೆ, ಎಎಪಿ, ವೈಎಸ್ಆರ್ಪಿ, ಬಿಜು ಜನತಾದಳ ಹಾಗೂ ಬಿಎಸ್ಪಿ ಪಕ್ಷಗಳು ಬೆಂಬಲ ನೀಡಿವೆ. ಟಿಆರ್ಎಸ್ ಸಹ ಕೇಂದ್ರದ ಬೆಂಬಲಕ್ಕೆ ನಿಂತಿದೆ. ಕಾಂಗ್ರೆಸ್ ಮಾಡಿದ್ದ ತಪ್ಪನ್ನು ಈಗ ಸರಿ ಪಡಿಸಲಾಗಿದೆ ಎಂದು ಟಿಆರ್ಎಸ್ ಎಂಪಿ ಹೇಳಿದ್ದಾರೆ.
ಈ ಮೂಲಕ ಜಮ್ಮು ಕಾಶ್ಮೀರಕ್ಕೆ ಈ ಹಿಂದೆ ಇದ್ದ ವಿಶೇಷ ಸ್ಥಾನಮಾನ ವಾಪಸ್ ಪಡೆಯುವಲ್ಲಿ ಕೇಂದ್ರ ಸರ್ಕಾರದ ನೆರವಿಗೆ ನಿಂತಿವೆ.
ಯಾರಿಂದ ತೀವ್ರ ವಿರೋಧ?
ಈ ನಡುವೆ, ಎಂಡಿಎಂಕೆ ಇದನ್ನು ವಿರೋಧಿಸಿದೆ. ಆರ್ಟಿಕಲ್ 370 ರದ್ದು ಮಾಡಿರುವ ಕ್ರಮವನ್ನ ಪ್ರಜಾಪ್ರಬುತ್ವ ವಿರೋಧಿ ಎಂದು ಹೇಳಿದ್ದಾರೆ.