ಕರ್ನಾಟಕ

karnataka

ETV Bharat / bharat

ಭಾನುವಾರದ ದಿನ ಭವಿಷ್ಯ: ಈ ರಾಶಿಯವರಿಗೆ ಹಣದ ಕೊರತೆ ಸಾಧ್ಯತೆ

ಭಾನುವಾರದ ದಿನ ಭವಿಷ್ಯ ಹೇಗಿದೆ ಅನ್ನೋದನ್ನ ತಿಳಿದುಕೊಳ್ಳಿ...

By

Published : Sep 15, 2019, 5:12 AM IST

ಭಾನುವಾರದ ದಿನ ಭವಿಷ್ಯ

ಮೇಷ:ನೀವು ಏಕಾಂಗಿಯಾಗಿರಬಹುದು ಆದರೆ ಒಂಟಿಯಲ್ಲ. ನೀವು ನಿಮ್ಮ ಆಂತರಿಕ ಧ್ವನಿಯನ್ನು ಕೇಳಲು ಬಯಸಿರಬಹುದು ಮತ್ತು ನಿಮ್ಮ ನೈಜ ಸ್ವಯಂ ಅನ್ನು ಸೃಜನಶೀಲವಾಗಿ ವ್ಯಕ್ತಪಡಿಸಲು ಬಯಸಿದ್ದೀರಿ. ಸಂಜೆಯನ್ನು ಮೌನದಲ್ಲೂ ಸಂಗೀತ ಆಲಿಸುವ ಪ್ರೀತಿಪಾತ್ರರೊಂದಿಗೆ ಕಳೆಯಿರಿ.

ವೃಷಭ:ಇಂದು ನೀವು ಸಂತೋಷ ಮತ್ತು ನೋವು ಎರಡನ್ನೂ ಜೊತೆ ಜೊತೆಯಲ್ಲಿ ಅನುಭವಿಸಬಹುದು. ಮಧ್ಯಾಹ್ನದ ವೇಳೆಗೆ ಮನೆಕೆಲಸಗಳು ನಿಮಗೆ ಭಾರವಾಗಬಹುದು. ದಿನದ ನಂತರದಲ್ಲಿ ನೀವು ನಿಮ್ಮ ಕಠಿಣ ಪರಿಶ್ರಮ ಮತ್ತು ಸಾಮರ್ಥ್ಯದಿಂದ ನೀವು ಬಯಸಿದ್ದನ್ನು ಸಾಧಿಸಲು ಶಕ್ತರಾಗುತ್ತೀರಿ. ಸಂತೋಷ ನಿಮ್ಮ ಆತ್ಮ ಸಂಗಾತಿಯ ಪ್ರೀತಿ ಮತ್ತು ಜೊತೆಯಲ್ಲಿದೆ.

ಮಿಥುನ: ಇಂದು ನೀವು ನಿಮ್ಮ ಸಮಯವನ್ನು ಕೆಲಸ ಮತ್ತು ಕುಟುಂಬದ ನಡುವೆ ವಿಂಗಡಿಸಿ ಕೆಲಸ ಮಾಡುತ್ತೀರಿ. ನಿಮಗೆ ಎಷ್ಟೇ ಒತ್ತಡ ಇದ್ದರೂ ನೀವು ನಿಮ್ಮ ಕುಟುಂಬದೊಂದಿಗೆ ಕಳೆಯಲು ಹಾಗೂ ಸಣ್ಣ ಟ್ರಿಪ್ ಮಾಡಲೂ ಅಗತ್ಯವಾದ ಸಮಯ ದೊರೆಯುತ್ತದೆ, ಇದರಿಂದ ಅವರು ಸಂತೋಷಪಡುತ್ತಾರೆ. ಹೆಚ್ಚುವರಿಯಾಗಿ, ನಿಮ್ಮ ಕನಸುಗಳು ಕೂಡಾ ನಿಜವಾಗುತ್ತವೆ.

ಕರ್ಕಾಟಕ: ನೀವು ತಾಳ್ಮೆ ಕಳೆದುಕೊಳ್ಳಬೇಡಿ, ಏಕೆಂದರೆ ಅದು ನಿಮ್ಮ ಪ್ರೀತಿಪಾತ್ರರನ್ನು ನೋಯಿಸುತ್ತದೆ. ಲೇಖಕರು ಅವರ ಸೃಜನಶೀಲ ದಾರಿಯಲ್ಲಿರುತ್ತಾರೆ. ದಿನ ಕಲಾವಿದರಿಗೆ ಪೂರಕವಾಗಿದೆ. ಹೊಸ ಯೋಜನೆಗಳನ್ನು ತೆಗೆದುಕೊಳ್ಳುವಲ್ಲಿ ಕೂಡಾ ಇದು ಫಲದಾಯಕ.

ಸಿಂಹ: ವಿವೇಚನೆ ಇಲ್ಲದೆ ಖರ್ಚು ಮಾಡುವ ನಿಮ್ಮ ಬಯಕೆಯಿಂದ ಇಂದು ನೀವು ಹಣದ ಕೊರತೆಯನ್ನು ಎದುರಿಸುತ್ತೀರಿ. ನೀವು ಅನಗತ್ಯ ವಿಷಯಗಳಲ್ಲಿ ಹಣ ಖರ್ಚು ಮಾಡಬಾರದು. ಅತಿಯಾಗಿ ಖರ್ಚು ಮಾಡುವುದನ್ನೂ ನಿಯಂತ್ರಿಸಬೇಕು.

ಕನ್ಯಾ: ನಿಮ್ಮ ಪ್ರೀತಿಪಾತ್ರರು ಆಶ್ಚರ್ಯ ನೀಡುವುದು ಮಾತ್ರವಲ್ಲ ಬೇಡಿಕೆಯನ್ನೂ ಇಡುತ್ತಾರೆ. ವ್ಯಾಪಾರದಲ್ಲಿ ಕೆಲ ಉನ್ನತಗೊಳಿಸುವ ಸುದ್ದಿ ಇರಬಹುದು. ನಿಮ್ಮ ಹಳೆಯ ತಪ್ಪುಗಳನ್ನು ಒಪ್ಪಿಕೊಳ್ಳಿ ಮತ್ತೆ ಅವುಗಳನ್ನು ಪುನರಾವರ್ತಿಸದೇ ಇರಲು ನೋಡಿಕೊಳ್ಳಿ ಮತ್ತು ಭವಿಷ್ಯದ ಯೋಜನೆಗಳನ್ನು ರೂಪಿಸಿ.

ತುಲಾ: ನೀವು ಭವ್ಯ ಭವಿಷ್ಯಕ್ಕೆ ನಿಮ್ಮ ಹಳೆಯ ಅನುಭವಗಳಿಂದ ಸಾಕಷ್ಟು ಪಡೆದುಕೊಳ್ಳಬೇಕು. ನೀವು ಹೊಂದಿರುವ ದುಬಾರಿ ವಸ್ತುವಿನ ಬಗ್ಗೆ ನೀವು ಕೊಂಚ ಪೊಸೆಸಿವ್ ಆಗಿದ್ದೀರಿ. ವಿವಿಧ ಸಮಸ್ಯೆಗಳ ಕುರಿತು ಸಾಕಷ್ಟು ಆತಂಕಗಳಿವೆ, ಅದು ನಿಮಗೆ ಒತ್ತಡ ತರುತ್ತದೆ.

ವೃಶ್ಚಿಕ:ಇಂದು ನಿಮಗೆ ಆರೋಗ್ಯದ ಸಲಹೆಗಳನ್ನು ನೀಡುವ ದಿನ. ಆರೋಗ್ಯಕರ ತಿನ್ನುವ ಅಭ್ಯಾಸಗಳು ಮತ್ತು ನಿಯಮಿತ ವ್ಯಾಯಾಮ ನಿಮ್ಮನ್ನು ಬೊಜ್ಜಿನಂತಹ ಸಮಸ್ಯೆಗಳಿಂದ ದೂರವಿಡುತ್ತದೆ. ಅನಿಯಮಿತ ತಿನ್ನುವ ಅಭ್ಯಾಸಗಳು ಮತ್ತು ಅನಾರೋಗ್ಯಕರ ಜೀವನಶೈಲಿ ನಿಮಗೆ ಹಲವು ಸಮಸ್ಯೆಗಳನ್ನು ತರುತ್ತದೆ. ಆರೋಗ್ಯಕರವಾಗಿ ತಿನ್ನಿರಿ, ಸಂತೋಷವಾಗಿರಿ.

ಧನು: ನೀವು ಇಂದು ನಿಮ್ಮದೇ ತೀರ್ಪುಗಾರ ಆಗುತ್ತೀರಿ. ಪ್ರತಿಫಲನದಿಂದ ನೀವು ನಿಮ್ಮ ಜೀವನದಲ್ಲಿ ಉಂಟಾದ ಹಲವು ಸಮಸ್ಯೆಗಳ ಕಾರಣಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೀರಿ. ಅದು ಸಮಯ ತೆಗೆದುಕೊಂಡರೂ ನಿಮಗೆ ಬೇಕಾಗಿದ್ದನ್ನು ಪಡೆಯುತ್ತೀರಿ ಮತ್ತು ಅದಕ್ಕೆ ಸೂಕ್ತ ಉತ್ತರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೀರಿ.

ಮಕರ: ಇಂದು ನೀವು ಸಾಕಷ್ಟು ಕೆಲಸಗಳಿಂದ ಒತ್ತಡದಲ್ಲಿದ್ದೀರಿ. ಆದರೆ, ಅಂತಹ ಒತ್ತಡಗಳಿಗೆ ಬಗ್ಗುವವರು ನೀವಲ್ಲ. ವಾಸ್ತವವಾಗಿ ನೀವು ಗುರಿ ನಿಗದಿಪಡಿಸಿ ಅದರತ್ತ ಕೆಲಸ ಮಾಡುತ್ತೀರಿ, ನಿಮ್ಮನ್ನು ತಡೆಯುವವರೇ ಇಲ್ಲ. ನೀವು ಯಶಸ್ವಿಯಾಗುವ ಸಾಧ್ಯತೆ ಹೆಚ್ಚಾಗಿದೆ.

ಕುಂಭ:ನೀವು ನಿಮ್ಮ ಗುರಿಗಳನ್ನು ಈಡೇರಿಸಿಕೊಳ್ಳಲು ನಿಮ್ಮ ಕೆಲಸಕ್ಕೆ ವೇಗ ನೀಡಿರಿ ಮತ್ತು ಪ್ರತಿಯೊಂದನ್ನೂ ಪ್ರಯತ್ನಿಸಿ. ಆದರೂ ಸಕಾಲಕ್ಕೆ ಗುರಿ ಈಡೇರಿಸಲು ಸಾಧ್ಯವಿಲ್ಲ. ನಾಳೆ ವಿಭಿನ್ನವಾದ ದಿನ ಆದ್ದರಿಂದ ಭರವಸೆ ಕಳೆದುಕೊಳ್ಬೇಡಿ. ನಿಮಗೆ ವಿಶ್ರಾಂತಿ ಮತ್ತು ನೆಮ್ಮದಿಗೆ ಸಮಯ ನೀಡಿ.

ಮೀನ: ಪ್ರಮುಖ ವೆಚ್ಚಗಳು ನಿಮ್ಮ ದಾರಿಯಲ್ಲಿವೆ. ಆದರೆ ಒಳ್ಳೆಯ ಸುದ್ದಿ ಎಂದರೆ ಅಗತ್ಯಗಳು ಮತ್ತು ಬಯಕೆಗಳ ನಡುವೆ ಗೆರೆ ಎಳೆದು ಅವುಗಳನ್ನು ತಪ್ಪಿಸಬಹುದು. ಕೊಂಚ ನಿಯಂತ್ರಣ ಹೇರಿಕೊಂಡರೆ ನಂತರ ನಿಮಗೆ ಉಳಿತಾಯ ಹೆಚ್ಚಿಸುತ್ತದೆ.

ABOUT THE AUTHOR

...view details