ಸಂಭಾಲ್: ಉತ್ತರ ಪ್ರದೇಶದ ಸಂಭಾಲ್ನಲ್ಲಿ ಶುಕ್ರವಾರ ಬಿಜೆಪಿ ಆಯೋಜಿಸಿದ್ದ 'ಹೋಳಿ ಮಿಲನ್' ಕಾರ್ಯಕ್ರಮದ ವೇದಿಕೆ ಕುಸಿದಿದೆ. ಬಿಜೆಪಿಯ ಕಿಸಾನ್ ಮೋರ್ಚಾ ನಾಯಕ ಅವಧೀಶ್ ಯಾದವ್ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.
ಹಠಾತ್ ಕುಸಿದ ವೇದಿಕೆ... ಬಿಜೆಪಿ ನಾಯಕರಿಗೆ ಗಾಯ - etv bharat
ಹೋಳಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದ ವೇದಿಕೆ ಕುಸಿದು ಅವಘಡ. ಬಿಜೆಪಿ ಕಾರ್ಯಕರ್ತರಿಗೆ ಗಾಯ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ.
![ಹಠಾತ್ ಕುಸಿದ ವೇದಿಕೆ... ಬಿಜೆಪಿ ನಾಯಕರಿಗೆ ಗಾಯ](https://etvbharatimages.akamaized.net/etvbharat/images/768-512-2772438-750-6ab96283-5e24-4943-a633-833a1a6ff008.jpg)
ಹೋಳಿ ಮಿಲನ್ ಕಾರ್ಯಕ್ರಮದ ವೇದಿಕೆ ಕುಸಿತ.
ನಾಯಕರು ವೇದಿಕೆ ಮೇಲಿದ್ದಾಗಲೇ ಘಟನೆ ಸಂಭವಿಸಿದ್ದು, ಕ್ಯಾಮರಾದಲ್ಲಿ ಸೆರೆಯಾಗಿದೆ. ವೇದಿಕೆ ಮೇಲೆ ಜನ ಹೆಚ್ಚಾಗಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ.
ಈ ಹಿಂದೆಯೂ ಕಾರ್ಯಕ್ರಮಗಳ ವೇದಿಕೆ ಕುಸಿತ ಪ್ರಕರಣಗಳು ನಡೆದಿವೆ. 2017ರಲ್ಲಿ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್ ಅವರಿಗಾಗಿ ನಿರ್ಮಿಸಿದ್ದ ವೇದಿಕೆ ಕುಸಿದಿತ್ತು.