ಕರ್ನಾಟಕ

karnataka

By

Published : Jan 29, 2021, 6:42 AM IST

ETV Bharat / bharat

ಶ್ರೀ ಕೃಷ್ಣ ಜನ್ಮಭೂಮಿ ಪ್ರಕರಣ: ಮಸೀದಿ ತೆರವು ಕುರಿತ ಆದೇಶ ಕಾಯ್ದಿರಿಸಿದ ಕೋರ್ಟ್​

ಶ್ರೀ ಕೃಷ್ಣ ಜನ್ಮಭೂಮಿಗೆ ಸೇರಿದ 13.37 ಎಕರೆ ಭೂಮಿ ಮರು ಪಡೆಯುವ ಹಾಗೂ ಶಾಹಿ ಈದ್ಗಾ ಮಸೀದಿ ತೆರವು ಕುರಿತ ತೀರ್ಪನ್ನು ಮಥುರಾ ಕೋರ್ಟ್​ ಕಾಯ್ದಿರಿಸಿದೆ.

Sri Krishna Janmabhoomi case
ಶ್ರೀಕೃಷ್ಣ ಜನ್ಮಭೂಮಿ ಪ್ರಕರಣ

ಮಥುರಾ(ಉತ್ತರ ಪ್ರದೇಶ):ಶ್ರೀ ಕೃಷ್ಣ ಜನ್ಮಭೂಮಿಯ ಮಾಲೀಕತ್ವ ಮತ್ತು ದೇವಾಲಯದ ಬಳಿ ಇರುವ ಮಸೀದಿ ತೆರವುಗೊಳಿಸಬೇಕೆಂದು ಕೋರಿ ಸಲ್ಲಿಕೆಯಾದ ಅರ್ಜಿ ಸಂಬಂಧ ಮಥುರಾ ಜಿಲ್ಲಾ ನ್ಯಾಯಾಲಯವು ತನ್ನ ಆದೇಶ ಕಾಯ್ದಿರಿಸಿದೆ.

ಶ್ರೀ ಕೃಷ್ಣ ಜನ್ಮಭೂಮಿಗೆ ಸೇರಿದ 13.37 ಎಕರೆ ಭೂಮಿಯನ್ನು ಮರುಪಡೆಯಲು ಹಾಗೂ ಕೃಷ್ಣ ಹುಟ್ಟಿದ ಈ ಪ್ರದೇಶದಲ್ಲಿರುವ ಕತ್ರಿ ಕೇಶವ್ ದೇವ್ ದೇವಸ್ಥಾನದ ಆವರಣದಲ್ಲಿ 17ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಶಾಹಿ ಈದ್ಗಾ ಮಸೀದಿಯನ್ನು ತೆಗೆದುಹಾಕಬೇಕು ಎಂದು ಕೋರಿ ರಂಜನಾ ಅಗ್ನಿಹೋತ್ರಿ ಸೇರಿದಂತೆ ಐವರು ವಕೀಲರು 2019ರ ಸೆಪ್ಟೆಂಬರ್​ನಲ್ಲಿ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಚುನಾವಣಾ ಸಮಿತಿಯ ಜೊತೆಗೆ ಹೋರಾಟವೇಕೆ? ವಿಶೇಷ ಲೇಖನ ಓದಿ..

ಪ್ರಸ್ತುತ ಶಾಹಿ ಈದ್ಗಾ ಮಸೀದಿಯನ್ನು ಸುನ್ನಿ ಕೇಂದ್ರ ಮಂಡಳಿಯ ಒಪ್ಪಿಗೆಯೊಂದಿಗೆ ಟ್ರಸ್ಟ್ ಮಸೀದಿ ಈದ್ಗಾ ನಿರ್ವಹಣಾ ಸಮಿತಿ ನಿರ್ವಹಿಸುತ್ತಿದೆ.

ABOUT THE AUTHOR

...view details