ಕರ್ನಾಟಕ

karnataka

ETV Bharat / bharat

ಕಡಿಮೆ ಬೆಲೆಯಲ್ಲಿ ಧಾನ್ಯ ವಿತರಣೆ: ಕೇಂದ್ರದ ನಿರ್ಧಾರ ಸ್ವಾಗತಿಸಿ ಮೋದಿಗೆ ಸೋನಿಯಾ ಪತ್ರ - ಪತ್ರ ಬರೆದ ಸೋನಿಯಾ

ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹ ಎಂದು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಪತ್ರ ಬರೆದು, ಕೆಲವು ಅಗತ್ಯ ಸಲಹೆಗಳನ್ನು ನೀಡಿದ್ದಾರೆ.

Sonia Gandhi writes to PM
Sonia Gandhi writes to PM

By

Published : Apr 13, 2020, 7:17 PM IST

Updated : Apr 13, 2020, 7:23 PM IST

ನವದೆಹಲಿ:ದೇಶಾದ್ಯಂತ ಲಾಕ್​ಡೌನ್‌ನಿಂದಾಗಿ ಬಡವರು ತೊಂದರೆ ಅನುಭವಿಸಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಕಡಿಮೆ ಬೆಲೆಯಲ್ಲಿ ಆಹಾರ ಧಾನ್ಯಗಳನ್ನು ನೀಡುವ ಯೋಜನೆ ಜಾರಿಗೊಳಿಸಿದೆ. ಈ ನಿರ್ಧಾರಕ್ಕೆ ಸೋನಿಯಾ ಗಾಂಧಿ ಸಂತಸ ವ್ಯಕ್ತಪಡಿಸಿದ್ದಾರೆ.

ಪತ್ರ ಬರೆದ ಸೋನಿಯಾ

ಈ ಹಿಂದೆಯೂ ಕೂಡ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ ಸೋನಿಯಾ ಗಾಂಧಿ ಇದೀಗ ಮತ್ತೊಮ್ಮೆ ಪತ್ರ ಬರೆದು, ಲಾಕ್​ಡೌನ್​ ವೇಳೆ ದೇಶದ ಯಾವುದೇ ಪ್ರಜೆ ಹಸಿವಿನಿಂದ ತೊಂದರೆಗೆ ಸಿಲುಕಬಾರದು ಎಂದಿದ್ದಾರೆ.

ಪತ್ರ ಬರೆದ ಸೋನಿಯಾ

ಕಡಿಮೆ ಬೆಲೆಯಲ್ಲಿ ನೀಡುವ ರೇಷನ್ ಅನ್ನು ಮುಂದಿನ ಸೆಪ್ಟೆಂಬರ್​ವರೆಗೂ ವಿಸ್ತರಿಸಬೇಕು. ದೇಶದಲ್ಲಿ ಲಕ್ಷಾಂತರ ಜನರು ಆಹಾರ ತೊಂದರೆಯಿಂದ ಬಳಲುತ್ತಿದ್ದಾರೆ. ಅವರಿಗೆ ಯಾವ ರೀತಿಯಲ್ಲೂ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದು ಹಿರಿಯ ಕಾಂಗ್ರೆಸ್ ನಾಯಕಿ ಸಲಹೆ ನೀಡಿದ್ದಾರೆ.

Last Updated : Apr 13, 2020, 7:23 PM IST

ABOUT THE AUTHOR

...view details