ತೆಲಂಗಾಣ :ಆನ್ಲೈನ್ನಲ್ಲಿ ಮಾಡಿದ ಸಾಲವನ್ನು ತೀರಿಸಲು ಸಾಧ್ಯವಾಗದೆ ಸಾಫ್ಟ್ವೇರ್ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ರಂಗರೆಡ್ಡಿ ಜಿಲ್ಲೆಯ ರಾಜೇಂದ್ರ ನಗರದಲ್ಲಿ ನಡೆದಿದೆ.
ಗುಂಟೂರು ಜಿಲ್ಲೆಯ ಆಂಧ್ರಪ್ರದೇಶದ ನಿವಾಸಿ ಸುನಿಲ್ ಆತ್ಮಹತ್ಯೆಗೆ ಮಾಡಿಕೊಂಡ ಉದ್ಯೋಗಿ. ಇವರು ಹೈದರಾಬಾದಿನಲ್ಲಿ ಸಾಫ್ಟ್ವೇರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದು, ರಾಜೇಂದ್ರ ಪಿಎಸ್ ಪ್ರದೇಶದ ಕಿಸ್ಮತ್ಪುರ್ ಓಮ್ ನಗರದಲ್ಲಿ ನೆಲೆಸಿದ್ದರು.
ಓದಿ: ಅಪಪ್ರಚಾರವನ್ನು ನಂಬಬೇಡಿ ; ರೈತರಿಗೆ ಕೃಷಿ ಸಚಿವ ತೋಮರ್ 8 ಪುಟಗಳ ಪತ್ರ
ಅಷ್ಟೇ ಅಲ್ಲ, ಸುನಿಲ್ ತಮ್ಮ ಅವಶ್ಯಕತೆಗಳಿಗಾಗಿ ಕೆಲವು ಆನ್ಲೈನ್ ಅಪ್ಲಿಕೇಶನ್ಗಳಿಂದ ಸಾಲವಾಗಿ ಸಾಕಷ್ಟು ಹಣ ತೆಗೆದುಕೊಂಡಿದ್ದನಂತೆ. ಮಾಡಿದ ಸಾಲವನ್ನು ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನ್ಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.
ಈ ಸಂಬಂಧ ಸುನಿಲ್ ಪತ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆದಿದೆ.