ಕರ್ನಾಟಕ

karnataka

ETV Bharat / bharat

ಮನೆ-ಅಂಗಡಿಗಳ ಮುಂದೆ ಅಸ್ಥಿಪಂಜರಗಳನ್ನ ಕಂಡು ದಂಗಾದ ಜನರು

ಈ ಕೃತ್ಯ ಎಸಗಿದವರು ಯಾರೆಂಬುದರ ಬಗ್ಗೆ ಸುಳಿವು ಸಿಕ್ಕಿಲ್ಲ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ರಸ್ತೆಯಲ್ಲಿನ ಸಿಸಿಟಿವಿ ದೃಶ್ಯ ಪಡೆದು ತನಿಖೆ ಮುಂದುವರೆಸಿದ್ದಾರೆ..

By

Published : Aug 8, 2020, 6:21 PM IST

Skeletons found in front of houses in Tamil Nadu
ಮನೆ-ಅಂಗಡಿಗಳ ಮುಂದೆ ಅಸ್ಥಿಪಂಜರಗಳನ್ನ ಕಂಡು ದಂಗಾದ ಜನರು

ದಿಂಡಿಗಲ್(ತಮಿಳುನಾಡು) : ಬೆಳಗೆದ್ದು ಮನೆ ಬಾಗಿಲು ತೆರೆದ ಜನರಿಗೆ ಅಚ್ಚರಿಯ ಸಂಗತಿಯೊಂದು ಕಾದಿತ್ತು. ಮನೆಹೊಸ್ತಿಲಲ್ಲಿ ಕಣ್ಣಿಗೆ ಅಸ್ಥಿಪಂಜರಗಳು ಕಾಣಬೇಕೇ.. ತಮಿಳುನಾಡಿನ ಪಳನಿ ಪಟ್ಟಣದ ದೇವಾಂಗರ್ ಪ್ರದೇಶದಲ್ಲಿರುವ ಕೆಲವು ಮನೆಗಳು ಹಾಗೂ ಅಂಗಡಿಗಳ ಮುಂದೆ ಅರಿಶಿಣ-ಕುಂಕುಮ ಹಚ್ಚಿದ ಮಾನವನ ತಲೆಬುರುಡೆ ಮತ್ತು ಮೂಳೆಗಳು ಪತ್ತೆಯಾಗಿವೆ.

ಮನೆ-ಅಂಗಡಿಗಳ ಮುಂದೆ ಅಸ್ಥಿಪಂಜರಗಳನ್ನ ಕಂಡು ದಂಗಾದ ಜನ

ಮಾಟ-ಮಂತ್ರ ಮಾಡಿಸಿರುವ ಶಂಕೆ ವ್ಯಕ್ತಪಡಿಸಿರುವ ಅಲ್ಲಿನ ನಿವಾಸಿಗಳು, ಕೃತ್ಯ ಎಸಗಿದವರು ಯಾರೆಂಬುದರ ಬಗ್ಗೆ ಸುಳಿವು ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ರಸ್ತೆಯಲ್ಲಿನ ಸಿಸಿಟಿವಿ ದೃಶ್ಯ ಪಡೆದು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details