ಕರ್ನಾಟಕ

karnataka

ಹೆದ್ರಬೇಡಿ ನಾನಿದ್ದೀನಿ... ಕಣ್ಣೀರಿಟ್ಟ ಇಸ್ರೋ ಅಧ್ಯಕ್ಷ ಶಿವನ್​ ಅವರನ್ನು ತಬ್ಬಿ ಸಂತೈಸಿದ ಮೋದಿ

ಚಂದ್ರಯಾನ2 ಯೋಜನೆಯ ಪ್ರಮುಖ ಘಟ್ಟವಾದ ವಿಕ್ರಮ್​ ಲ್ಯಾಂಡರ್​, ಲ್ಯಾಂಡಿಂಗ್​ ವೇಳೆ ಸಂಪರ್ಕ ಕಳೆದುಕೊಂಡ ಹಿನ್ನೆಲೆ ದುಃಖಿತರಾದ ಇಸ್ರೋ ಅಧ್ಯಕ್ಷ ಶಿವನ್​ ಅವರು ಕಣ್ಣೀರಿಟ್ಟಿದ್ದನ್ನು ಕಂಡ ಪ್ರಧಾನಿ ಮೋದಿ ಅವರು ಅವರನ್ನು ತಬ್ಬಿ ಸಂತೈಸಿದರು.

By

Published : Sep 7, 2019, 9:04 AM IST

Published : Sep 7, 2019, 9:04 AM IST

Updated : Sep 7, 2019, 12:28 PM IST

ಇಸ್ರೋ ಅಧ್ಯಕ್ಷ ಶಿವನ್-ಮೋದಿ

ಬೆಂಗಳೂರು​: ಚಂದ್ರಯಾನ2 ಯೋಜನೆಯ ಪ್ರಮುಖ ಘಟ್ಟವಾದ ವಿಕ್ರಮ್​ ಲ್ಯಾಂಡರ್​, ಲ್ಯಾಂಡಿಂಗ್​ ವೇಳೆ ಸಂಪರ್ಕ ಕಳೆದುಕೊಂಡ ಹಿನ್ನೆಲೆ ದುಃಖಿತರಾದ ಇಸ್ರೋ ಅಧ್ಯಕ್ಷ ಶಿವನ್​ ಅವರು ಕಣ್ಣೀರಿಟ್ಟಿದ್ದನ್ನು ಕಂಡ ಪ್ರಧಾನಿ ಮೋದಿ ಅವರು ಅವರನ್ನು ತಬ್ಬಿ ಸಂತೈಸಿದರು.

ಇಂದು ಬೆಳಗ್ಗೆ 8 ಗಂಟೆಗೆ ಬೆಂಗಳೂರಿನ ಇಸ್ರೋ ನಿಯಂತ್ರಣ ಕೇಂದ್ರದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿ ಹೊರ ಬಂದ ಬಳಿಕ ಎಲ್ಲ ವಿಜ್ಞಾನಿಗಳಿಗೂ ಮೋದಿ ಧೈರ್ಯ ತುಂಬಿದರು.

ಹೆದ್ರಬೇಡಿ ನಾನಿದ್ದೀನಿ

ಮೋದಿ ಅವರು ಇನ್ನೇನು ಹೊಸ್ತಿಲು ದಾಟುತ್ತಿರುವಾಗ ಶಿವನ್​ ಅವರು ಕಣ್ಣಿರಿಡುತ್ತಾ ಹೊರ ನಿಂತಿದ್ದನ್ನು ನೋಡಿದ ಪ್ರಧಾನಿ ಅವರು, ಅವರನ್ನು ಅಪ್ಪಿ, ಬೆನ್ನು ಸವರಿ ಸಂತೈಸಿದರು.

ನಿಮ್ಮ ವಿಶ್ವಾಸ ನಾವು ಸುಳ್ಳು ಮಾಡುವುದಿಲ್ಲ ಸರ್​ ಎಂದು ಶಿವನ್​ ಅವರು ಮೋದಿ ಅವರಗೆ ಕೊನೆಯದಾಗಿ ಹೇಳಿದಂತಿತ್ತು.

Last Updated : Sep 7, 2019, 12:28 PM IST

ABOUT THE AUTHOR

...view details