ಕರ್ನಾಟಕ

karnataka

ದಿಶಾ ಅತ್ಯಾಚಾರ, ಕೊಲೆ ಪ್ರಕರಣ: ಎನ್​ಕೌಂಟರ್​ ಬಗ್ಗೆ ತನಿಖೆ ನಡೆಸಲು ಎಸ್​ಐಟಿ ರಚನೆ

ತೆಲಂಗಾಣ ಸರ್ಕಾರ ಈ ಸಂಬಂಧ ಎನ್‌ಕೌಂಟರ್ ಪ್ರಕರಣದ ವಿಚಾರಣೆ ನಡೆಸಲು ಎಸ್​ಐಟಿ ತಂಡ ರಚನೆ ಮಾಡಿದೆ. ರಾಚಕೊಂಡ ಪೊಲೀಸ್ ಆಯುಕ್ತ ಮಹೇಶ್ ಭಾಗವತ್ ಅವರು ಏಳು ಸದಸ್ಯರನ್ನೊಳಗೊಂಡ ಎಸ್‌ಐಟಿ ತಂಡವನ್ನು ಮುನ್ನಡೆಸಲಿದ್ದಾರೆ.

By

Published : Dec 9, 2019, 2:30 AM IST

Published : Dec 9, 2019, 2:30 AM IST

Updated : Dec 9, 2019, 6:37 AM IST

ಎನ್​ಕೌಂಟರ್​ ಬಗ್ಗೆ ತನಿಖೆ ನಡೆಸಲು ಎಸ್​ಐಟಿ ರಚನೆ ,SIT formed  to investigate the encounter
ಎನ್​ಕೌಂಟರ್​ ಬಗ್ಗೆ ತನಿಖೆ ನಡೆಸಲು ಎಸ್​ಐಟಿ ರಚನೆ

ತೆಲಂಗಾಣ: ದಿಶಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ದೇಶವೇ ನಿಬ್ಬೆರಗಾಗುವಂತೆ ಅತ್ಯಾಚಾರ ನಡೆದ 9 ದಿನಕ್ಕೆ ಶಿಕ್ಷೆ ವಿಧಿಸಿದ ತೆಲಂಗಾಣ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾದರೆ, ಪೊಲೀಸರು ಮಾತ್ರ ಈಗ ಕಾನೂನಿಗೆ ತಕ್ಕ ಉತ್ತರ ನೀಡಬೇಕಾಗಿದೆ.

ಎನ್​ಕೌಂಟರ್​ ಬಗ್ಗೆ ತನಿಖೆ ನಡೆಸಲು ಎಸ್​ಐಟಿ ರಚನೆ
ಎನ್​ಕೌಂಟರ್​ ಬಗ್ಗೆ ತನಿಖೆ ನಡೆಸಲು ಎಸ್​ಐಟಿ ರಚನೆ

ತೆಲಂಗಾಣ ಸರ್ಕಾರ ಈ ಸಂಬಂಧ ಎನ್‌ಕೌಂಟರ್ ಪ್ರಕರಣದ ವಿಚಾರಣೆ ನಡೆಸಲು ಎಸ್​ಐಟಿ ತಂಡ ರಚನೆ ಮಾಡಿದೆ. ರಾಚಕೊಂಡ ಪೊಲೀಸ್ ಆಯುಕ್ತ ಮಹೇಶ್ ಭಾಗವತ್ ಅವರು ಏಳು ಸದಸ್ಯರನ್ನೊಳಗೊಂಡ ಎಸ್‌ಐಟಿ ತಂಡವನ್ನು ಮುನ್ನಡೆಸಲಿದ್ದಾರೆ.

ನವೆಂಬರ್ 28 ಬುಧವಾರ, ಮೊಹಮದ್​ ಆರಿಫ್​, ಚಿಂತಕುಂಟ ಚೆನ್ನಕೇಶವುಲು, ಜೊಲ್ಲು ಶಿವ ಹಾಗೂ ಜೊಲ್ಲು ನವೀನ್​ ಎಂಬ ಆರೋಪಿಗಳು ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ ಬೆಂಕಿಹಚ್ಚಿ ಕ್ರೂರವಾಗಿ ಕೊಂದಿದ್ದರು. ಘಟನೆಗೆ ಸಂಬಂಧಿಸಿದಂತೆ ದೇಶದ ನಾನಾ ಕಡೆ ತ್ವರಿತ ನ್ಯಾಯಕ್ಕಾಗಿ ಆಗ್ರಹ ಕೇಳಿಬಂದಿತ್ತು.

Last Updated : Dec 9, 2019, 6:37 AM IST

ABOUT THE AUTHOR

...view details