ಕರ್ನಾಟಕ

karnataka

ಆಪ್ ಶಾಸಕನ ಬೆಂಗಾವಲು ವಾಹನದ ಮೇಲೆ ಗುಂಡಿನ ದಾಳಿ: ಓರ್ವ ಸಾವು

ಮೆಹ್ರೌಲಿಯ ಆಮ್​ ಆದ್ಮಿ ಶಾಸಕ ದೇವಸ್ಥಾನದಿಂದ ಹಿಂದಿರುಗಿ ಬರುತ್ತಿದ್ದ ವೇಳೆ ಅವರ ಬೆಂಗಾವಲು ವಾಹನದ ಮೇಲೆ ದಾಳಿ ಮಾಡಲಾಗಿದ್ದು, ಗುಂಡು ತಗುಲಿ ಪಕ್ಷದ ಅಶೋಕ್​ ಮಾನ್​ ಎಂಬ ಕಾರ್ಯಕರ್ತ ಮೃತಪಟ್ಟಿದ್ದು, ಇನ್ನೋರ್ವ ಗಾಯಗೊಂಡಿದ್ದಾನೆ.

By

Published : Feb 12, 2020, 2:29 AM IST

Published : Feb 12, 2020, 2:29 AM IST

Updated : Feb 12, 2020, 6:51 AM IST

firing on Mehrauli AAP MLA Naresh Yadav's convoy
ಆಪ್ ಶಾಸಕನ ಬೆಂಗಾವಲು ವಾಹನದ ಮೇಲೆ ಗುಂಡಿನ ದಾಳಿ

ನವದೆಹಲಿ: ಮೆಹ್ರೌಲಿಯ ಆಪ್​ ಶಾಸಕ ನರೇಶ್ ಯಾದವ್ ಅವರ ಬೆಂಗಾವಲು ವಾಹನದ ಮೇಲೆ ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಈ ಸಂಬಂಧ FIR ದಾಖಲಾಗಿದೆ.

ಮೆಹ್ರೌಲಿಯ ಆಮ್​ ಆದ್ಮಿ ಶಾಸಕ ದೇವಸ್ಥಾನದಿಂದ ಹಿಂದಿರುಗಿ ಬರುತ್ತಿದ್ದ ವೇಳೆ ಅವರ ಬೆಂಗಾವಲು ವಾಹನದ ಮೇಲೆ ದಾಳಿ ಮಾಡಲಾಗಿದ್ದು, ಗುಂಡು ತಗುಲಿ ಪಕ್ಷದ ಅಶೋಕ್​ ಮಾನ್​ ಎಂಬ ಕಾರ್ಯಕರ್ತ ಮೃತಪಟ್ಟಿದ್ದು, ಇನ್ನೋರ್ವನಿಗೆ ಗಾಯಗಳಾಗಿರುವುದಾಗಿ AAP ತನ್ನ ಅಧಿಕೃತ ಟ್ವಿಟರ್​ನಲ್ಲಿ ತಿಳಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ​ಶಾಸಕ ನರೇಶ್ ಯಾದವ್, ಇದೊಂದು ದರದೃಷ್ಟಕರ ಸಂಗತಿ. ನಾನಿದ್ದ ವಾಹನಕ್ಕೆ ನಾಲ್ಕು ಬಾರಿ ಗುಂಡು ಹಾರಿಸಲಾಗಿದೆ. ಈ ದಾಳಿಯ ಹಿಂದಿನ ಕಾರಣ ನನಗೆ ಅರ್ಥವಾಗುತ್ತಿಲ್ಲ. ಪೊಲೀಸರು ಸರಿಯಾಗಿ ತನಿಖೆ ನಡೆಸಿದರೆ ದುಷ್ಕರ್ಮಿಗಳನ್ನು ಬೇಗ ಪತ್ತೆ ಹಚ್ಚಬಹುದು ಎಂದು ಘಟನೆಗೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಆಪ್​ನ ನಾಯಕ ಸಂಜಯ್​ ಸಿಂಗ್​ ಕೂಡ ರಾಜಧಾನಿಯ ಕಾನೂನು ಸುವ್ಯವಸ್ಥೆಯನ್ನು ಪ್ರಶ್ನಿಸಿ ಟ್ವೀಟ್​ ಮಾಡಿದ್ದಾರೆ.

ಮಂಗಳವಾರ ಹೊರಬಿದ್ದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 62 ಸ್ಥಾನಗಳನ್ನು ಪಡೆಯುವ ಮೂಲಕ AAP ಪಕ್ಷ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಿದೆ.

Last Updated : Feb 12, 2020, 6:51 AM IST

ABOUT THE AUTHOR

...view details