ಕರ್ನಾಟಕ

karnataka

ಅಹಂಕಾರದ ಕುರ್ಚಿಯಿಂದ ಎದ್ದೇಳಿ.. ರೈತರಿಗೆ ನ್ಯಾಯ ಒದಗಿಸಿ.. ಕೇಂದ್ರಕ್ಕೆ ರಾಹುಲ್‌ ಗಾಂಧಿ ಆಗ್ರಹ

By

Published : Dec 1, 2020, 1:29 PM IST

ರೈತರಿಗೆ ನ್ಯಾಯ ನೀಡಿ, ಹಕ್ಕು ಒದಗಿಸುವುದರ ಮೂಲಕ ಮಾತ್ರ ಅವರ ಋಣ ತೀರಿಸಬಹುದೇ ಹೊರತು, ಅವರ ಮೇಲೆ ಲಾಠಿಯಿಂದ ಹೊಡೆಯುವುದರಿಂದ, ಅಶ್ರುವಾಯು ಪ್ರಯೋಗಿಸುವುದರಿಂದ ಅಲ್ಲ..

Rahul
ರಾಹುಲ್ ಗಾಂಧಿ

ನವದೆಹಲಿ :ಕೇಂದ್ರ ಸರ್ಕಾರ ತನ್ನ ಅಹಂಕಾರ ಬಿಟ್ಟು ಪ್ರತಿಭಟನಾ ನಿರತ ರೈತರಿಗೆ ನ್ಯಾಯ ಒದಗಿಸಬೇಕೆಂದು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ರೈತರ 'ದೆಹಲಿ ಚಲೋ' ಪ್ರತಿಭಟನೆ ಮುಂದುವರೆದಿದೆ. ಪಂಜಾಬ್, ಹರಿಯಾಣದ ರೈತರು ದೆಹಲಿ ಪ್ರವೇಶಿಸದಂತೆ ಗಡಿಭಾಗಗಳಲ್ಲೇ ತಡೆಯಲಾಗುತ್ತಿದೆ. ಇದನ್ನು ವಿರೋಧಿಸಿ ರಾಹುಲ್​ ಗಾಂಧಿ ಟ್ವೀಟ್​ ಮಾಡಿದ್ದಾರೆ.

"ಅಹಂಕಾರದ ಕುರ್ಚಿಯಿಂದ ಎದ್ದೇಳಿ. ರೈತರಿಗೆ ಪ್ರತಿಭಟಿಸುವ ಹಕ್ಕನ್ನು ನೀಡಿ. ಅನ್ನದಾತ ರಸ್ತೆಗೆ ಪ್ರತಿಭಟಿಸಲು ಇಳಿದಿದ್ದಾನೆ. ನಾವೆಲ್ಲರೂ ರೈತರ ಕಠಿಣ ಪರಿಶ್ರಮಕ್ಕೆ ಋಣಿಯಾಗಿದ್ದೇವೆ.

ಅವರಿಗೆ ನ್ಯಾಯ ನೀಡಿ, ಹಕ್ಕು ಒದಗಿಸುವುದರ ಮೂಲಕ ಮಾತ್ರ ಈ ಋಣ ತೀರಿಸಬಹುದೇ ಹೊರತು ಅವರ ಮೇಲೆ ಲಾಠಿಯಿಂದ ಹೊಡೆಯುವುದರಿಂದ, ಅಶ್ರುವಾಯು ಪ್ರಯೋಗಿಸುವುದರಿಂದ ಅಲ್ಲ" ಎಂದು ರಾಹುಲ್‌ ಗಾಂಧಿ ಕಿಡಿಕಾರಿದ್ದಾರೆ.

ABOUT THE AUTHOR

...view details