ಮುಂಬೈ (ಮಹಾರಾಷ್ಟ್ರ): ವಾಸೈ ರಸ್ತೆ - ಗೋರಖ್ಪುರ್ ಶರ್ಮಿಕ್ ವಿಶೇಷ ರೈಲು ಒಡಿಶಾ ಮೂಲಕ ಚಲಿಸಿದೆ. ಇದರಿಂದ ವಲಸಿಗರು ತಡವಾಗಿ ತಮ್ಮ ಊರುಗಳನ್ನು ತಲುಪಿದ್ದಾರೆ. ಅವರೆಲ್ಲರೂ ಸರಿಯಾದ ಸಮಯಕ್ಕೆ ಊರು ಸೇರಬೇಕು ಎಂಬುದು ನಮ್ಮ ಮನವಿ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ತಿಳಿಸಿದ್ದಾರೆ.
"ಮಹಾರಾಷ್ಟ್ರದಿಂದ 125 ರೈಲುಗಳ ಪಟ್ಟಿ ಎಲ್ಲಿದೆ? ಮುಂಜಾನೆ 2 ರ ಹೊತ್ತಿಗೆ, ಕೇವಲ 46 ರೈಲುಗಳ ಪಟ್ಟಿಯನ್ನು ಸ್ವೀಕರಿಸಲಾಗಿದೆ, ಅದರಲ್ಲಿ 5 ರೈಲುಗಳು ಪಶ್ಚಿಮ ಬಂಗಾಳ ಮತ್ತು ಒಡಿಶಾಕ್ಕೆ ಹೋಗುತ್ತವೆ. ಇದು ಅಂಫಾನ್ ಚಂಡಮಾರುತದಿಂದಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ.125 ರೈಲುಗಳನ್ನು ನೀಡಲು ವಾವು ಸಿದ್ಧವಾಗಿದ್ದರೂ, ಇಂದು ಕೇವಲ 41 ರೈಲುಗಳನ್ನು ಮಾತ್ರ ತಿಳಿಸಲಾಗಿದೆ. ಇನ್ನೊಂದು ಗಂಟೆಯೊಳಗಾಗಿ ರೈಲು ಎಲ್ಲಿಂದ ಓಡುತ್ತದೆ, ರೈಲುಗಳ ಪ್ರಕಾರ ಪ್ರಯಾಣಿಕರ ಪಟ್ಟಿ, ಅವರ ವೈದ್ಯಕೀಯ ಪ್ರಮಾಣಪತ್ರ ಮತ್ತು ರೈಲು ಎಲ್ಲಿಗೆ ಹೋಗಬೇಕು ಎಂಬಂತಹ ಎಲ್ಲ ಮಾಹಿತಿಯನ್ನು ದಯವಿಟ್ಟು ಒದಗಿಸುವಂತೆ ನಾನು ವಿನಂತಿಸುತ್ತಿದ್ದೇನೆ. ಇದರಿಂದ ನಾವು ರೈಲುಗಳ ಸಮಯವನ್ನು ಯೋಜಿಸಬಹುದು ಎಂದು ರೈಲ್ವೆ ಸಚಿವರು ಟ್ವೀಟ್ ಮಾಡಿದ್ದಾರೆ.