ಕರ್ನಾಟಕ

karnataka

ETV Bharat / bharat

ಸಾವಿರಾರು ಕೋಟಿ ವಂಚಿಸಿ ಪರಾರಿಯಾದ ವಂಚಕನ ಆಸ್ತಿ ಹರಾಜಿಗೆ! ಅಷ್ಟಕ್ಕೂ ವಿಶೇಷತೆ ಏನು ಗೊತ್ತಾ? - ನೀರವ್​ ಮೋದಿ

ಬ್ಯಾಂಕ್​ ಹಗರಣವೊಂದರಲ್ಲಿ ಸಿಲುಕಿ ದೇಶ ಬಿಟ್ಟು ಪಲಾಯನಗೊಂಡಿದ್ದ ಉದ್ಯಮಿ ನೀರವ್​ ಮೋದಿಯ ಆಸ್ತಿಗಳನ್ನು ಈಗಾಗಲೇ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಫೆಬ್ರವರಿ 27 ಮತ್ತು ಮಾರ್ಚ್ 3-4ರಂದು ಎಲ್ಲಾ ಆಸ್ತಿಗಳನ್ನು ಹರಾಜಿಗೆ ಇಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

Seized assets of Nirav Modi
ಹರಾಜಾಗಲಿದೆ ನೀರವ್​​ ಮೋದಿಯ ಆಸ್ತಿ

By

Published : Jan 21, 2020, 7:34 PM IST

ನವದೆಹಲಿ: ಪಂಜಾಬ್​ ನ್ಯಾಷನಲ್​​ ಬ್ಯಾಂಕ್​ನ ಹಗರಣದ ಪ್ರಮುಖ ರೂವಾರಿಯಾಗಿರುವ ನೀರವ್​​ ಮೋದಿ ದೇಶ ಬಿಟ್ಟು ಪರಾರಿಯಾಗಿರೋದು, ಲಂಡನ್​ ಜೈಲಿನಲ್ಲಿ ಬಂಧನದಲ್ಲಿರುವುದು ಗೊತ್ತೇ ಇದೆ. ಇದೀಗ ಹೊಸ ವಿಷಯ ಏನೆಂದರೆ, ನೀರವ್​ನಿಂದ ಜಪ್ತಿ ಮಾಡಿರುವ ಆಸ್ತಿಗಳನ್ನು ಹರಾಜು ಮಾಡಲು ಸರ್ಕಾರ ಆದೇಶಿಸಿದೆ.

ಈ ಹರಾಜು ಪ್ರಕ್ರಿಯೆ ಎರಡು ಹಂತದಲ್ಲಿ ನಡೆಯಲಿದ್ದು, ಮೊದಲ ಹರಾಜು ಫೆಬ್ರವರಿ 27 ರಂದು ಮುಂಬೈನಲ್ಲಿ ನಡೆಯಲಿದೆ ಹಾಗೂ ಮಾರ್ಚ್ 3-4 ರಂದು ಸ್ಯಾಫ್ರೋನಾರ್ಟ್​ ಆನ್‌ಲೈನ್ ಹರಾಜು ಸಂಸ್ಥೆಯ ಮುಖಾಂತರ ಎರಡನೇ ಹರಾಜು ಪ್ರಕ್ರಿಯೆ ಆನ್‌ಲೈನ್​​ನಲ್ಲಿ ನಡೆಯಲಿದೆ. ಉದ್ಯಮಿ ನೀರವ್ ಮೋದಿಯ ಕಲಾಕೃತಿಗಳು, ಐಷಾರಾಮಿ ಕೈಗಡಿಯಾರಗಳು ಮತ್ತು ಕಾರು ಸೇರಿದಂತೆ ಇನ್ನಿತರ ವಶಪಡಿಸಿಕೊಂಡ ಆಸ್ತಿಗಳನ್ನು ಹರಾಜಿಗೆ ಹಾಕಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಸಂಬಂಧ ಸರ್ಕಾರದಿಂದ ಅಧಿಕೃತ ಮುದ್ರೆಯೂ ಬಿದ್ದಿದೆ.

ಹರಾಜಿನಲ್ಲಿರುವ ಐಶಾರಾಮಿ ವಸ್ತುಗಳ್ಯಾವವು ಗೊತ್ತೇ?

ಈ ಹರಾಜಿನಲ್ಲಿ 15ಕ್ಕೂ ಹೆಚ್ಚು ಕಲಾಕೃತಿಗಳಿದ್ದು, 12 ರಿಂದ 18 ಕೋಟಿ ಬೆಲೆ ಬಾಳುವ ಅಮೃತ ಶೇರ್ - ಗಿಲ್ ಅವರ ಮಹತ್ವದ ಆಧುನಿಕ ಮತ್ತು ಸಮಕಾಲೀನ ಭಾರತೀಯದ ಕಲಾಕೃತಿ ಹಾಗೂ 7ರಿಂದ 9 ಕೋಟಿ ಬೆಲೆ ಬಾಳುವ 1972 ರ ವಿ.ಎಸ್.ಗೈಟೊಂಡೆ ಅವರ ಪ್ರಶಾಂತ ನೀಲಿ ವರ್ಣಚಿತ್ರ ಕಲಾಕೃತಿ, ಮಂಜಿತ್ ಬಾವಾ ಅವರ 3ರಿಂದ 5 ಕೋಟಿ ಬೆಲೆ ಬಾಳುವ ಕೃಷ್ಣನ ಕಲಾಕೃತಿ ಸೇರಿದಂತೆ ಇನ್ನಿತರ ಬೆಲೆ ಬಾಳುವ ಕಲಾಕೃತಿಗಳನ್ನು ಈ ಹರಾಜು ಪ್ರಕ್ರಿಯೆಯಲ್ಲಿ ಇರಿಸಲಾಗಿದೆ.

ಕಲಾಕೃತಿಗಳು ಮಾತ್ರವಲ್ಲದೇ ದುಬಾರಿ ಬೆಲೆಯ ಒಮೆಗಾ, ಟಿಎಜಿ ಹಿಯರ್, ರೋಲೆಕ್ಸ್, ಬ್ರೆಟ್ಲಿಂಗ್, ಜಾಗ್ವಾರ್​ ಲೆಕೌಲ್ಟ್ರೆ ಕಂಪನಿಗೆ ಸೇರಿದಂತಹ 80ಕ್ಕೂ ಹೆಚ್ಚು ಕೈಗಡಿಯಾರಗಳು ಈ ಹರಾಜಿನಲ್ಲಿ ಇರಲಿವೆ.

ಹರಾಜಿನ ಬಗ್ಗೆ ಆನ್​​ಲೈನ್​​​​​​​​​​​ ಸಂಸ್ಥೆ ಹೇಳೋದಿಷ್ಟು!

ಇನ್ನು ಈ ಹರಾಜಿನ ಬಗ್ಗೆ ಸ್ಯಾಫ್ರೋನಾರ್ಟ್​ ಆನ್‌ಲೈನ್ ಹರಾಜಿನ ಸಂಸ್ಥೆಯ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದಿನೇಶ್​ ವಜಿರಾಣಿ ಪ್ರತಿಕ್ರಿಯಿಸಿದ್ದು, ಇಲ್ಲಿ ಹರಾಜಿಗೆ ಇಡಲಾದ ವಸ್ತುಗಳೆಲ್ಲವೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹು ಬೇಡಿಕೆ ಇರುವಂತದ್ದಾಗಿದೆ. ದೊಡ್ಡ ದೊಡ್ಡ ಐಷಾರಾಮಿ ವ್ಯಕ್ತಿಗಳು ಇದನ್ನು ಬಳಸುವುದಾದ್ದರಿಂದ ಈ ಹರಾಜಿನ ಪ್ರಕ್ರಿಯೆಯಲ್ಲಿ ಎಲ್ಲಾ ವಸ್ತುಗಳಿಗೆ ಬಹು ಬೇಡಿಕೆ ಇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details