ಕರ್ನಾಟಕ

karnataka

ETV Bharat / bharat

ಉತ್ತರಾಖಂಡ ಹಿಮಪಾತದಲ್ಲಿ ಸಿಲುಕಿದ್ದ 12 ಮಂದಿಯ ರಕ್ಷಣೆ

ಇವರೆಲ್ಲರೂ ಅಗೋಡಾದಿಂದ ಓಜ್ರಿಗೆ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೊರಟಿದ್ದರು. ಕಾರ್ಯಾಚರಣೆ ನಡೆಸಿ ಇವರನ್ನು ರಕ್ಷಿಸಿರುವುದಾಗಿ ಎಸ್​ಡಿಆರ್​ಎಫ್ ತಿಳಿಸಿದೆ..

By

Published : Feb 5, 2021, 1:36 PM IST

snowfall in Uttarakhand
ಉತ್ತರಾಖಂಡ ಹಿಮಪಾತದಲ್ಲಿ ಸಿಲುಕಿದ್ದ 12 ಮಂದಿಯ ರಕ್ಷಣೆ

ಉತ್ತರಕಾಶಿ :ಉತ್ತರಾಖಂಡದಲ್ಲಿ ಭಾರೀ ಹಿಮಪಾತವಾಗುತ್ತಿದೆ. ಇಲ್ಲಿನ ಬಾರ್ಕೋಟ್​ ಪಟ್ಟಣದಲ್ಲಿ ಸಿಲುಕಿದ್ದ 12 ಮಂದಿಯನ್ನು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್​ಡಿಆರ್​ಎಫ್​) ರಕ್ಷಿಸಿದೆ.

ರಾಜ್ಯದ ಅನೇಕ ಪ್ರದೇಶಗಳಲ್ಲಿ ರಸ್ತೆ ಮಾರ್ಗಗಳು ಹಿಮಾವೃತವಾದ ಕಾರಣ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಹೀಗಾಗಿ, ಮೂರ್ನಾಲ್ಕು ವಾಹನಗಳಲ್ಲಿದ್ದ 12 ಜನರು ಉತ್ತರಕಾಶಿ ಜಿಲ್ಲೆಯ ಬಾರ್ಕೋಟ್​ ಪಟ್ಟಣದಲ್ಲಿ ಸಿಲುಕಿದ್ದರು.

ಇದನ್ನೂ ಓದಿ: ಮೇಲ್ಸೇತುವೆಯ ಒಂದು ಭಾಗ ಕುಸಿತ: ಗುತ್ತಿಗೆದಾರನಿಗೆ 3 ಕೋಟಿ ರೂ.ದಂಡ

ಇವರೆಲ್ಲರೂ ಅಗೋಡಾದಿಂದ ಓಜ್ರಿಗೆ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೊರಟಿದ್ದರು. ಕಾರ್ಯಾಚರಣೆ ನಡೆಸಿ ಇವರನ್ನು ರಕ್ಷಿಸಿರುವುದಾಗಿ ಎಸ್​ಡಿಆರ್​ಎಫ್ ತಿಳಿಸಿದೆ.

For All Latest Updates

ABOUT THE AUTHOR

...view details