ಕರ್ನಾಟಕ

karnataka

ETV Bharat / bharat

'ಕೈ' ಕಾರ್ಯಕ್ರಮದ ವೇಳೆ ಗಲಭೆ: ಹಾರ್ದಿಕ್​​ ಪಟೇಲ್​ ಬೆಂಬಲಿಗರಿಂದ ಥಳಿತ - undefined

ಅಹಮದಾಬಾದ್​ನಲ್ಲಿ ಕಾಂಗ್ರೆಸ್​ ಕಾರ್ಯಕ್ರಮದ ವೇಳೆ ಗಲಭೆ ಉಂಟಾಗಿದ್ದು, ಮಾರಾಮಾರಿ ನಡೆದಿದೆ.

ಕೈ ಕಾರ್ಯಕ್ರಮದ ವೇಳೆ ಗಲಬೆ

By

Published : Apr 21, 2019, 12:15 AM IST

Updated : Apr 21, 2019, 6:30 AM IST

ಅಹಮದಾಬಾದ್​(ಗುಜರಾತ್​):ಕಾಂಗ್ರೆಸ್​ ನಾಯಕ ಹಾರ್ದಿಕ್​ ಪಟೇಲ್​ ಭಾಗವಹಿಸಿದ್ದ ಸಾರ್ವಜನಿಕ ಸಭೆಯಲ್ಲಿ ಗಲಭೆ ಉಂಟಾಗಿದ್ದು, ಕಾರ್ಯಕರ್ತರು ಮಾರಾಮಾರಿ ನಡೆಸಿದ್ದಾರೆ.

ಕಾರ್ಯಕ್ರಮದ ವೇಳೆ ಕೆಲವರು ಹಾರ್ದಿಕ್​ ಪಟೇಲ್​ ವಿರುದ್ಧ ಘೋಷಣೆ ಕೂಗಿದ್ದಾರೆ. ಈ ವೇಳೆ ಹಾರ್ದಿಕ್​ ಬೆಂಬಲಿಗರು ರೊಚ್ಚಿಗೆದ್ದಿದ್ದು, ಘೋಷಣೆ ಕೂಗಿದವರನ್ನ ಮನಬಂದಂತೆ ಥಳಿಸಿದ್ದಾರೆ. ಹೀಗಾಗಿ 10ರಿಂದ 15 ನಿಮಿಷಗಳ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಹಾರ್ದಿಕ್​ ಪಟೇಲ್​ ಬೆಂಬಲಿಗರು ಕೆಲಕಾಲ ಪ್ರಧಾನಿ ಮೋದಿ ವಿರುದ್ಧ ಘೋಷಣೆಯನ್ನೂ ಕೂಗಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಹಾರ್ದಿಕ್​ ಪಟೇಲ್,​ ಅಹಮದಾಬಾದ್ ಪೂರ್ವ ಲೋಕಸಭಾ ಕ್ಷೇತ್ರದ ಜನರನ್ನು ನಾನು ಉದ್ದೇಶಿಸಿ ನಾನು ಮಾತನಾಡಿದ್ದೇನೆ. ಕಾಂಗ್ರೆಸ್ ಕಾರ್ಯಕ್ರಮವನ್ನ ಖಂಡಿಸಲು ಬಿಜೆಪಿ ಪ್ರಯತ್ನಿಸಿದೆ. ಆದರೆ ಜನರು ಪಕ್ಷವನ್ನು ನಂಬಿದ್ದಾರೆ. ಒಬ್ಬ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಭಾರತೀಯರಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದಾನೆ. ಜೈ ಹಿಂದ್ ಎಂದು ಟ್ವೀಟ್​ ಮಾಡಿದ್ದಾರೆ.

ಈ ಹಿಂದೆ ಸುರೇಂದ್ರನಗರದಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಸಮಾರಂಭದಲ್ಲಿ ಹಾರ್ದಿಕ್​ ಪಟೇಲ್​ಗೆ ವ್ಯಕ್ತಿಯೊಬ್ಬ ಕಪಾಳ ಮೋಕ್ಷ ಮಾಡಿದ್ದ.

Last Updated : Apr 21, 2019, 6:30 AM IST

For All Latest Updates

TAGGED:

ABOUT THE AUTHOR

...view details