ಕರ್ನಾಟಕ

karnataka

ETV Bharat / bharat

'ದೂಧ್​ ದುರಂತೋ ಸ್ಪೆಷಲ್​'; ದೇಶಕ್ಕೆ ಹಾಲು ಪೂರೈಸಲು ಓಡುತ್ತಿದೆ ವಿಶೇಷ ರೈಲು..

'ದೂಧ್​ ದುರಂತೋ ಸ್ಪೆಷಲ್​' ರೈಲು ಶನಿವಾರ ಬೆಳಿಗ್ಗೆ 08:00 ಗಂಟೆಗೆ ಆಂಧ್ರಪ್ರದೇಶದ ರೆನಿಗುಂಟಾ ನಿಲ್ದಾಣದಿಂದ ಹೊರಟಿದ್ದು, ಇಂದು ಸಂಜೆ 5: 40ಕ್ಕೆ ರಾಷ್ಟ್ರ ರಾಜಧಾನಿಯ ನಿಜಾಮುದ್ದೀನ್ ರೈಲ್ವೆ ನಿಲ್ದಾಣವನ್ನು ತಲುಪಲಿದೆ. ಈ ರೈಲು ಆರು ಹಾಲಿನ ಟ್ಯಾಂಕರ್‌ಗಳನ್ನು ಹೊಂದಿದ್ದು, ಪ್ರತಿಯೊಂದೂ 40,000 ಲೀಟರ್ ಸಾಮರ್ಥ್ಯ ಹೊಂದಿದೆ. ಒಟ್ಟು ಆರು ಟ್ಯಾಂಕರ್​ಗಳಲ್ಲಿ 2.40 ಲಕ್ಷ ಲೀಟರ್ ಹಾಲು ಇದೆ. ದೇಶದಲ್ಲಿ ಹಾಲಿಗೆ ಬೇಡಿಕೆ ಹೆಚ್ಚಿರುವುದರಿಂದಾಗಿ ಸಂಪೂರ್ಣ ಹಾಲಿನ ಟ್ಯಾಂಕರ್​ ರೈಲನ್ನು ಓಡಿಸಲು ಇಲಾಖೆ ನಿರ್ಧರಿಸಿದೆ. ಇದರೊಂದಿಗೆ ಇತರ ಅಗತ್ಯ ಸರಕುಗಳನ್ನು ಹೊತ್ತ ಕೆಲವು ಬೋಗಿಗಳೂ ಇರಲಿವೆ.

By

Published : Apr 5, 2020, 12:09 PM IST

Updated : Apr 5, 2020, 12:26 PM IST

Doodh Duranto Special
ದೂದ್​ ದುರಂತೋ ಸ್ಪೆಷಲ್

ನವದೆಹಲಿ: ರಾಷ್ಟ್ರವ್ಯಾಪಿ ಲಾಕ್​ಡೌನ್​ನಿಂದಾಗಿ ಜನರಿಗೆ ಅಗತ್ಯ ವಸ್ತುಗಳಿಗೆ ಯಾವುದೇ ಸಮಸ್ಯೆಗಳಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ. ಹೀಗಾಗಿ ದೇಶಾದ್ಯಂತ ನಿರಂತರ ಹಾಲು ಸರಬರಾಜು ಮಾಡಲು ದಕ್ಷಿಣ ಮಧ್ಯ ರೈಲ್ವೆ 2.40 ಲಕ್ಷ ಲೀಟರ್ ಹಾಲು ತುಂಬಿರುವ 'ದೂಧ್​ ದುರಂತೋ ಸ್ಪೆಷಲ್​' ರೈಲನ್ನು ಶನಿವಾರ ಆರಂಭಿಸಿದೆ.

ಈ ಸೂಪರ್‌ಫಾಸ್ಟ್ ರೈಲು ಶನಿವಾರ ಬೆಳಗ್ಗೆ 8:00 ಗಂಟೆಗೆ ಆಂಧ್ರಪ್ರದೇಶದ ರೆನಿಗುಂಟಾ ನಿಲ್ದಾಣದಿಂದ ಹೊರಟಿದ್ದು, ಇಂದು ಸಂಜೆ 5:40ಕ್ಕೆ ರಾಷ್ಟ್ರ ರಾಜಧಾನಿಯ ನಿಜಾಮುದ್ದೀನ್ ರೈಲ್ವೆ ನಿಲ್ದಾಣ ತಲುಪಲಿದೆ.

ದೂಧ್​ ದುರಂತೋ ಸ್ಪೆಷಲ್..

ಈ ರೈಲು ಆರು ಹಾಲಿನ ಟ್ಯಾಂಕರ್‌ಗಳನ್ನು ಹೊಂದಿದ್ದು, ಪ್ರತಿಯೊಂದೂ 40,000 ಲೀಟರ್ ಸಾಮರ್ಥ್ಯ ಹೊಂದಿದೆ. ಒಟ್ಟು ಆರು ಟ್ಯಾಂಕರ್​ಗಳಲ್ಲಿ 2.40 ಲಕ್ಷ ಲೀಟರ್ ಹಾಲು ಇದೆ. ಹಾಲಿನ ಜೊತೆಗೆ ಈ ರೈಲು ರೆನಿಗುಂಟಾ ಮತ್ತು ಸಿಕಂದರಾಬಾದ್‌ನಿಂದ 23 ಟನ್ ಮಾವಿನಹಣ್ಣು ಮತ್ತು ಗುಂಟಕಲ್​ನಿಂದ 23 ಟನ್ ಕಲ್ಲಂಗಡಿ ಹಣ್ಣನ್ನೂ ಹೊತ್ತೊಯ್ದಿದೆ.

ಏಪ್ರಿಲ್ 14ರವರೆಗೆ ಪ್ರಯಾಣಿಕರ ರೈಲು(passenger train)ಸೇವೆಗಳನ್ನು ಸ್ಥಗಿತಗೊಳಿಸಿದ್ದರಿಂದ, ರೈಲುಗಳ ಮೂಲಕ ಹಾಲು ಸರಬರಾಜನ್ನು ಇಲಾಖೆ ಮುಂದುವರಿಸಲು ನಿರ್ಧರಿಸಿದೆ. ಹಾಲಿಗೆ ಬೇಡಿಕೆ ಹೆಚ್ಚಿರುವುದರಿಂದಾಗಿ ಸಂಪೂರ್ಣ ಹಾಲಿನ ಟ್ಯಾಂಕರ್​ ರೈಲನ್ನು ಓಡಿಸಲು ಇಲಾಖೆ ನಿರ್ಧರಿಸಿದೆ. ಇದರೊಂದಿಗೆ ಇತರ ಅಗತ್ಯ ಸರಕುಗಳನ್ನು ಹೊತ್ತ ಕೆಲವು ಬೋಗಿಗಳೂ ಇರಲಿವೆ.

ಅಗತ್ಯ ಸಾಮಗ್ರಿಗಳ ರವಾನೆ..

ಈ ರೈಲುಗಳು ಯಾವುದೇ ರೀತಿಯ ನಿರ್ಬಂಧವಿಲ್ಲದೆ ಗಂಟೆಗೆ ಸರಾಸರಿ 110 ಕಿ.ಮೀ ವೇಗದಲ್ಲಿ ಎಕ್ಸ್‌ಪ್ರೆಸ್ ರೈಲುಗಳಿಗೆ ಸಮನಾಗಿ ಚಲಿಸುತ್ತವೆ. ಇದರಿಂದಾಗಿ ರೈಲು 36 ಗಂಟೆಗಳ ಒಳಗೆ ಗಮ್ಯಸ್ಥಾನವನ್ನು ತಲುಪುತ್ತದೆ. ಹಾಲು ಅಥವಾ ಇತರ ಉತ್ಪನ್ನಗಳನ್ನು ಲೋಡ್ ಮಾಡುವಾಗ ನೈರ್ಮಲ್ಯ, ಸಾಮಾಜಿಕ ಅಂತರ ಮೊದಲಾದ ಮುನ್ನೆಚ್ಚರಿಕೆ ಕ್ರಮಗಳನ್ನು ರೈಲ್ವೆ ಇಲಾಖೆ ತೆಗೆದುಕೊಂಡಿದೆ.

Last Updated : Apr 5, 2020, 12:26 PM IST

ABOUT THE AUTHOR

...view details