ಕರ್ನಾಟಕ

karnataka

By

Published : Feb 7, 2020, 7:21 AM IST

ETV Bharat / bharat

ನಿರ್ಭಯಾ ಪ್ರಕರಣ: ಇಂದು ಸುಪ್ರೀಂ​ನಲ್ಲಿ ಕೇಂದ್ರದ ಮೇಲ್ಮನವಿ ವಿಚಾರಣೆ

ನಿರ್ಭಯಾ ಅಪರಾಧಿಗಳ ವಿರುದ್ಧ ದೆಹಲಿ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಕೇಂದ್ರದ ಮೇಲ್ಮನವಿಯನ್ನು ಇಂದು ಸುಪ್ರೀಂ ಕೋರ್ಟ್ ಆಲಿಸಲಿದೆ.

Nirbhaya hanging convicts, Nirbhaya hanging convicts sc news, Nirbhaya hanging convicts sc latest news, ನಿರ್ಭಯಾ ಗಲ್ಲು ಅಪರಾಧಿಗಳು, ನಿರ್ಭಯಾ ಗಲ್ಲು ಅಪರಾಧಿಗಳ ಸುಪ್ರೀಂ ವಿಚಾರಣೆ, ನಿರ್ಭಯಾ ಗಲ್ಲು ಅಪರಾಧಿಗಳ ಸುಪ್ರೀಂ ವಿಚಾರಣೆ ಸುದ್ದಿ,
ಸಂಗ್ರಹ ಚಿತ್ರ

ನವದೆಹಲಿ:ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಫೆಬ್ರವರಿ 1ರಂದು ನಿಗದಿಯಾಗಿದ್ದ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡಿದ್ದ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯನ್ನು ಇಂದು ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳಲಿದೆ.

ಕೇಂದ್ರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ ನಟರಾಜ್ ಅವರು ನ್ಯಾಯಮೂರ್ತಿಗಳಾದ ಎನ್.ವಿ ರಮಣ, ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ತುರ್ತು ವಿಚಾರಣೆಯ ವಿಷಯವನ್ನು ಈಗಾಗಲೇ ಪ್ರಸ್ತಾಪಿಸಿದ್ದಾರೆ.

ಗುರುವಾರದಿಂದ ಏಳು ದಿನಗಳಲ್ಲಿ ಅಪರಾಧಿಗಳು ಯಾವುದೇ ರೀತಿಯ ಅರ್ಜಿಯನ್ನು ಸಲ್ಲಿಸದಿರಲು ನಿರ್ಧರಿಸಿದರೆ, ಹೆಚ್ಚಿನ ವಿಳಂಬವಿಲ್ಲದೆ ಮುಂದಿನ ಕಾರ್ಯ ಕೈಗೊಳ್ಳಬಹುದು ಎಂದು ದೆಹಲಿ ಹೈಕೋರ್ಟ್​ ತಿಳಿಸಿದೆ.

ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಎಲ್ಲ ಅಪರಾಧಿಗಳನ್ನು ಒಟ್ಟಿಗೇ ಗಲ್ಲಿಗೇರಿಸಬೇಕು ಎಂದು ತೀರ್ಪು ನೀಡಿದೆ. ಅಪರಾಧಿಗಳು ಯಾವುದೇ ಕಾನೂನು ಪ್ರಕ್ರಿಯೆ ಕೈಗೊಳ್ಳುವುದಿದ್ದರೂ, ಅರ್ಜಿ ಸಲ್ಲಿಸುವುದಿದ್ದರೂ ಇನ್ನೊಂದು ವಾರದಲ್ಲಿ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಬುಧವಾರ ಸೂಚಿಸಿದೆ.

2017 ರಲ್ಲಿ ಹೈಕೋರ್ಟ್​ ನಾಲ್ವರು ಅಪರಾಧಿಗಳನ್ನು ಮರಣದಂಡನೆಗೆ ಒಳಪಡಿಸಬೇಕು ಎಂದು ಹೇಳಿತ್ತು. ಅ ವೇಳೆ ಸುಪ್ರೀಂ ಕೋರ್ಟ್​ ಕೂಡ ಅಪರಾಧಿಗಳ ಮೇಲ್ಮವಿಯನ್ನು ತಿರಸ್ಕರಿಸಿತ್ತು. ಇಷ್ಟಾದರೂ ಸಂಬಂಧಿಸಿದ ಜೈಲು ಅಧಿಕಾರಿಗಳು ಡೆತ್​​ ವಾರೆಂಟ್​ ಹೊರಡಿಸಿದ ಹಿನ್ನೆಲೆ ಅಧಿಕಾರಿಗಳನ್ನು ದೆಹಲಿ ಹೈಕೋರ್ಟ್​ ದೂಷಿಸಿದೆ ಎಂದು ಕೇಂದ್ರದ ಸಾಲಿಸಿಟರ್​ ಜನರಲ್​ ಅವರು ಸುಪ್ರೀಂ ಗಮನಕ್ಕೆ ತಂದಿದ್ದಾರೆ.

ಮುಖೇಶ್ ಕುಮಾರ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಕುಮಾರ್ ಶರ್ಮಾ (26) ಮತ್ತು ಅಕ್ಷಯ್ ಕುಮಾರ್ (31) ಅವರನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿದ್ದು, ಈ ನಾಲ್ವರು ಅಪರಾಧಿಗಳ ಮರಣದಂಡನೆಯನ್ನು ವಿಚಾರಣಾ ನ್ಯಾಯಾಲಯ ಜನವರಿ 31 ರಂದು ನೀಡಿದ್ದ ಆದೇಶದಲ್ಲಿ ಮುಂದಿನ ಆದೇಶದವರೆಗೆ ತಡೆಹಿಡಿದಿತ್ತು.

ABOUT THE AUTHOR

...view details