ಕರ್ನಾಟಕ

karnataka

ನ್ಯಾಯಾಂಗ ನಿಂದನೆ ಪ್ರಕರಣ: ಪ್ರಶಾಂತ್​ ಭೂಷಣ್​ಗೆ ಒಂದು ರೂ. ದಂಡ ವಿಧಿಸಿದ ಸುಪ್ರೀಂ

By

Published : Aug 31, 2020, 1:06 PM IST

ನ್ಯಾಯಾಂಗ ನಿಂದನೆ ಪ್ರಕರಣ ಸಂಬಂಧ ವಕೀಲ ಪ್ರಶಾಂತ್ ಭೂಷಣ್​ಗೆ ಒಂದು ರೂ. ದಂಡ ವಿಧಿಸಿ ಸುಪ್ರೀಂಕೋರ್ಟ್​ ತೀರ್ಪು ನೀಡಿದೆ. ಸೆ. 15ರ ಒಳಗಡೆ ದಂಡ ಕಟ್ಟದಿದ್ದರೆ ಮೂರು ವರ್ಷಗಳ ಕಾಲ ವಕೀಲ ವೃತ್ತಿ ಮಾಡುವಂತಿಲ್ಲ ಹಾಗೂ ಮೂರು ತಿಂಗಳ ಕಾಲ ಜೈಲುವಾಸ ಅನುಭವಿಸಬೇಕು ಎಂದು ಸೂಚಿಸಿದೆ.

SC imposes Re 1 fine on Prashant Bhushan
ಪ್ರಶಾಂತ್​ ಭೂಷಣ್​

ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣ ಸಂಬಂಧ ವಕೀಲ ಪ್ರಶಾಂತ್ ಭೂಷಣ್​ಗೆ ಒಂದು ರೂ. ದಂಡ ವಿಧಿಸಿ ಸುಪ್ರೀಂಕೋರ್ಟ್​ ತೀರ್ಪು ನೀಡಿದೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಟ್ವೀಟ್​ ಮಾಡಿದ್ದ ಪ್ರಶಾಂತ್ ಭೂಷಣ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು. ಸುಪ್ರೀಂಕೋರ್ಟ್ ನಡೆಸಿದ ವಿಚಾರಣೆಯಲ್ಲಿ ಪ್ರಶಾಂತ್ ಭೂಷಣ್​ ದೋಷಿ ಎಂಬುದು ಸಾಬೀತಾಗಿತ್ತು. ತಮ್ಮ ತಪ್ಪಿಗೆ ಕ್ಷಮೆ ಕೇಳುವಂತೆ ನ್ಯಾಯಾಲಯ ಸೂಚಿಸಿ, ಕಾಲಾವಕಾಶ ನೀಡಿತ್ತು. ಆದರೆ ಕ್ಷಮೆಯಾಚನೆ ಮಾಡುವುದಕ್ಕೆ ಪ್ರಶಾಂತ್ ಭೂಷಣ್ ನಿರಾಕರಿಸಿದ್ದರು.

ಇಂದು ಇವರಿಗೆ ಶಿಕ್ಷೆ ಪ್ರಮಾಣ ಪ್ರಕಟಿಸಿರುವ ನ್ಯಾ. ಅರುಣ್​ ಮಿಶ್ರಾ ನೇತೃತ್ವದ ನ್ಯಾಯಪೀಠ, ಒಂದು ರೂ. ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಸೆ. 15ರ ಒಳಗಡೆ ದಂಡ ಕಟ್ಟದಿದ್ದರೆ ಮೂರು ವರ್ಷಗಳ ಕಾಲ ವಕೀಲ ವೃತ್ತಿ ಮಾಡುವಂತಿಲ್ಲ ಹಾಗೂ ಮೂರು ತಿಂಗಳ ಕಾಲ ಜೈಲುವಾಸ ಅನುಭವಿಸಬೇಕು ಎಂದು ಸೂಚಿಸಿದೆ.

ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಆದರೆ ಇತರರ ಹಕ್ಕು-ಸ್ವಾತಂತ್ರ್ಯಕ್ಕೂ ಗೌರವ ನೀಡಬೇಕು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ABOUT THE AUTHOR

...view details