ಕರ್ನಾಟಕ

karnataka

ETV Bharat / bharat

ರಾಮಜನ್ಮಭೂಮಿಯಲ್ಲಿ ಸಿಕ್ಕ ವಸ್ತು ಸಂರಕ್ಷಿಸುವಂತೆ ಸಲ್ಲಿಸಲಾಗಿದ್ದ ಅರ್ಜಿ ವಜಾ.. ಅರ್ಜಿದಾರರಿಗೆ 1 ಲಕ್ಷ ರೂ. ದಂಡ!

ಅಯೋಧ್ಯೆಯಲ್ಲಿನ ರಾಮಜನ್ಮಭೂಮಿಯಲ್ಲಿ ಸಿಕ್ಕಿರುವ ಕಲಾಕೃತಿಗಳ ಸಂರಕ್ಷಣೆ ಮಾಡುವಂತೆ ಕೋರಿ ಸಲ್ಲಿಕೆ ಮಾಡಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇದೀಗ ಸುಪ್ರೀಂಕೊರ್ಟ್​​ನಿಂದ ವಜಾಗೊಂಡಿದೆ.

By

Published : Jul 20, 2020, 10:37 PM IST

Supreme Court
Supreme Court

ನವದೆಹಲಿ: ರಾಮಜನ್ಮಭೂಮಿಯಲ್ಲಿ ಸಿಕ್ಕ ವಸ್ತುಗಳ ಸಂರಕ್ಷಣೆ ಮಾಡುವಂತೆ ಕೋರಿ ಸಲ್ಲಿಕೆ ಮಾಡಲಾಗಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇಂದು ಸುಪ್ರೀಂಕೊರ್ಟ್​​ನಿಂದ ವಜಾಗೊಂಡಿವೆ.

ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಸಿಕ್ಕಿರುವ ವಸ್ತುಗಳ ಸಂರಕ್ಷಣೆ ವಿಚಾರವಾಗಿ ಈಗಾಗಲೇ ಪಂಚ ನ್ಯಾಯಾಧೀಶರ ಪೀಠ ಮಹತ್ವದ ತೀರ್ಪು ನೀಡಿದ್ದು, ಅವುಗಳನ್ನ ಸಂರಕ್ಷಣೆ ಮಾಡುವಂತೆ ತಿಳಿಸಿದೆ. ಇದೀಗ ಕ್ಷುಲಕ ಕಾರಣಕ್ಕಾಗಿ ಅರ್ಜಿ ಸಲ್ಲಿಕೆ ಮಾಡಲಾಗಿದ್ದರಿಂದ ಆಕ್ರೋಶಗೊಂಡಿರುವ ನ್ಯಾಯಾಧೀಶರಾದ ಅರುಣ್​ ಮಿಶ್ರಾ, ಬಿ. ಆರ್​ ಗವಾಯ್​ ಮತ್ತು ಕೃಷ್ಣನ್​ ಮುರಾರಿ ನೇತೃತ್ವದ ಪೀಠ ಈ ಮಹತ್ವದ ತೀರ್ಪು ನೀಡಿದೆ.

ಅರ್ಜಿದಾರರಿಗೆ 1 ಲಕ್ಷ ರೂ ದಂಡ ವಿಧಿಸಿದ್ದು, ಒಂದು ತಿಂಗಳೊಳಗೆ ಹಣ ಪಾವತಿ ಮಾಡುವಂತೆ ಸೂಚನೆ ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ಸತೀಶ್​ ಚಿಂದೂಜಿ ಶಂಭರ್ಕರ್​ ಮತ್ತು ಡಾ. ಅಂಬೇಡ್ಕರ್​ ಫೌಂಡೇಶನ್​ ಅರ್ಜಿ ಸಲ್ಲಿಕೆ ಮಾಡಿತ್ತು.

ABOUT THE AUTHOR

...view details