ಕರ್ನಾಟಕ

karnataka

By

Published : Aug 27, 2019, 11:34 AM IST

ETV Bharat / bharat

ಅನರ್ಹ ಶಾಸಕರಿಗೆ ಕೊಂಚ ರಿಲೀಫ್​​...! ತುರ್ತು ವಿಚಾರಣೆಗೆ ಸುಪ್ರೀಂ ಸಮ್ಮತಿ

ಸೋಮವಾರ ತುರ್ತು ವಿಚಾರಣೆ ಅಸಾಧ್ಯ ಎಂದಿದ್ದ ಸುಪ್ರೀಂಕೋರ್ಟ್​ ಇಂದು ತುರ್ತು ವಿಚಾರಣೆಗೆ ಸಮ್ಮತಿ ಸೂಚಿಸಿದೆ. ಈ ಮೂಲಕ ಅನರ್ಹತೆಯ ವಿಚಾರ ಶೀಘ್ರದಲ್ಲಿ ಬಗೆಹರಿಯುವ ಸಾಧ್ಯತೆ ನಿಚ್ಚಳವಾಗಿದೆ. ರಿಜಿಸ್ಟ್ರಾರ್​ ಪ್ರಕರಣವನ್ನು ಲಿಸ್ಟ್ ಮಾಡಿದ ಬಳಿಕ ಕೋರ್ಟ್​ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.

ಸುಪ್ರೀಂ

ನವದೆಹಲಿ: ಅನರ್ಹತೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದ ಅನರ್ಹ ಶಾಸಕರಿಗೆ ಇಂದು ಕೋರ್ಟ್​ ತುರ್ತು ವಿಚಾರಣೆಗೆ ಗ್ರೀನ್​ ಸಿಗ್ನಲ್ ನೀಡಿದ್ದು, ಪರಿಣಾಮ ಅನರ್ಹರು ಕೊಂಚ ನಿರಾಳರಾಗಿದ್ದಾರೆ.

ಸೋಮವಾರ ತುರ್ತು ವಿಚಾರಣೆ ಅಸಾಧ್ಯ ಎಂದಿದ್ದ ಸುಪ್ರೀಂ ಕೋರ್ಟ್​ ಇಂದು ತುರ್ತು ವಿಚಾರಣೆಗೆ ಸಮ್ಮತಿ ಸೂಚಿಸಿದೆ. ಈ ಮೂಲಕ ಅನರ್ಹತೆಯ ವಿಚಾರ ಶೀಘ್ರದಲ್ಲಿ ಬಗೆಹರಿಯುವ ಸಾಧ್ಯತೆ ನಿಚ್ಚಳವಾಗಿದೆ. ರಿಜಿಸ್ಟ್ರಾರ್​ ಪ್ರಕರಣವನ್ನು ಲಿಸ್ಟ್ ಮಾಡಿದ ಬಳಿಕ ಕೋರ್ಟ್​ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.

ಸ್ಪೀಕರ್ ರಮೇಶ್ ಕುಮಾರ್​ ಮೈತ್ರಿ ಸರ್ಕಾರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ 17 ಮಂದಿಯನ್ನು ಅನರ್ಹಗೊಳಿಸಿ ಮಹತ್ವದ ಘೋಷಣೆ ಮಾಡಿದ್ದರು. ಇದೇ ಆದೇಶವನ್ನು ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂ ಕೋರ್ಟ್​ಗೆ ತುರ್ತು ವಿಚಾರಣೆಗೆ ಮನವಿ ಮಾಡಿಕೊಂಡಿದ್ದರು.

ABOUT THE AUTHOR

...view details