ನವದೆಹಲಿ:ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಎಸ್ಎಆರ್ ಗಿಲಾನಿ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ.
ಸಂಸತ್ ಮೇಲಿನ ದಾಳಿ ಅರೋಪದಿಂದ ಖುಲಾಸೆಗೊಂಡಿದ್ದ ಗಿಲಾನಿ ಸಾವು! - ಸಂಸತ್ ಮೇಲಿನ ದಾಳಿ ಅರೋಪಿ ಗಿಲಾನಿ ಸಾವು
2001 ರ ಸಂಸತ್ತಿನ ದಾಳಿ ಆರೋಪದಿಂದ ಖುಲಾಸೆಗೊಂಡಿದ್ದ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಎಸ್ಎಆರ್ ಗಿಲಾನಿ ಕೊನೆಯುಸಿರೆಳೆದಿದ್ದಾರೆ.

ಎಸ್ಎಆರ್ ಗಿಲಾನಿ
ಸಂಸತ್ ದಾಳಿಯ ರೂವಾರಿಯಾಗಿದ್ದ ಅಫ್ಜಲ್ ಗುರು ಮರಣದ ಪುಣ್ಯಸ್ಮರಣೆ ಕಾರ್ಯಕ್ರಮವನ್ನ ಭಾರತೀಯ ಪ್ರೆಸ್ ಕ್ಲಬ್ನಲ್ಲಿ ಆಯೋಜನೆ ಮಾಡಿದ್ದಕ್ಕಾಗಿ 2016 ರಲ್ಲಿ ಗಿಲಾನಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು. ಆದ್ರೆ, ಕಾಶ್ಮೀರದ ವಿಚಾರವನ್ನ ಮಾತ್ರ ಚರ್ಚೆ ಮಾಡಲು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಗಿಲಾನಿ ಹೇಳಿದ್ದರು.
2001 ರ ಸಂಸತ್ತಿನ ದಾಳಿ ಪ್ರಕರಣದಲ್ಲಿ ಅಫ್ಜಲ್ ಗುರು ಜೊತೆ ಭಾಗಿಯಾಗಿರುವ ಆರೋಪದಲ್ಲಿ ಗಿಲಾನಿಗೂ ಮರಣದಂಡನೆ ವಿಧಿಸಲಾಯಿತು. ಆದರೆ, ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ 2003ರಲ್ಲಿ ಗಿಲಾನಿ ಅವರನ್ನ ಖುಲಾಸೆಗೊಳಿಸಿತ್ತು.