ಕರ್ನಾಟಕ

karnataka

By

Published : Apr 13, 2020, 7:02 PM IST

ETV Bharat / bharat

ಒಂದೊಳ್ಳೆ ಕಾರ್ಯ: ಕೊರೊನಾ ನಿಧಿಗಾಗಿ ತಮ್ಮ ಚಿತ್ರಗಳನ್ನು ಹರಾಜಿಗಿಟ್ಟ ಖ್ಯಾತ ಮರಳು ಶಿಲ್ಪಿ

ತಮ್ಮ ಚಿತ್ರಗಳನ್ನು ಟ್ವಿಟ್ಟರ್​ನಲ್ಲಿ ಪೋಸ್ಟ್​ ಮಾಡಿರುವ ಪಟ್ನಾಯಕ್, ಕೋವಿಡ್​ ವಿರುದ್ಧದ ಹೋರಾಟಕ್ಕೆ ಒಬ್ಬ ಕಲಾವಿದನಾಗಿ ನಾನು ದೇಶದೊಂದಿಗೆ ನಿಲ್ಲುತ್ತೇನೆ. ಹಣ ಸಂಗ್ರಹಣೆಗಾಗಿ​ ನನ್ನ ಕ್ಯಾನ್ವಾಸ್​ ಸ್ಯಾಂಡ್​ ಆರ್ಟ್​ಅನ್ನು ಹರಾಜಿಗಿಟ್ಟಿದ್ದೇನೆ. ಆಸಕ್ತರು ಟ್ವಿಟ್ಟರ್​ನಲ್ಲಿ ನೇರ ಸಂದೇಶದ ಮೂಲಕ ನನ್ನನ್ನು ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ. ನೀವೂ ಕೂಡಾ ನಿಧಿಗೆ ಸಹಾಯ ಮಾಡುವಿರಾದರೆ, ಈ ಚಿತ್ರಗಳನ್ನು ಕೊಳ್ಳಬಹುದು

Sudarshan Pattnaik
ಸುದರ್ಶನ್ ಪಟ್ನಾಯಕ್

ಭುವನೇಶ್ವರ:ಒಡಿಶಾದ ಪ್ರಖ್ಯಾತ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಕೊರೊನ ವೈರಸ್ ವಿರುದ್ಧದ ಹೋರಾಟಕ್ಕೆ ಹಣ ಸಂಗ್ರಹಿಸಲು ಕ್ಯಾನ್ವಾಸ್​ನಲ್ಲಿ ಬಿಡಿಸಿದ ತಮ್ಮ ಐದು ಮರಳು ಚಿತ್ರಗಳನ್ನು ಹರಾಜು ಹಾಕಿದ್ದಾರೆ.

ಹರಾಜಿನಿಂದ ಸಂಗ್ರಹವಾದ ಮೊತ್ತವನ್ನು ಪಿಎಂ ಕೇರ್ಸ್ ಫಂಡ್ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಲಾಗುವುದು ಎಂದು ಪಟ್ನಾಯಕ್ ತಿಳಿಸಿದ್ದಾರೆ.

ಸುದರ್ಶನ್ ಪಟ್ನಾಯಕ್

ಇನ್ನು ತಮ್ಮ ಕಲಾ ಚಿತ್ರಗಳನ್ನು ಟ್ವಿಟ್ಟರ್​ನಲ್ಲಿ ಪೋಸ್ಟ್​ ಮಾಡಿದ ಪಟ್ನಾಯಕ್, ಕೋವಿಡ್​ ವಿರುದ್ಧದ ಹೋರಾಟಕ್ಕೆ ಒಬ್ಬ ಕಲಾವಿದನಾಗಿ ನಾನು ದೇಶದೊಂದಿಗೆ ನಿಲ್ಲುತ್ತೇನೆ. ಹಣ ಸಂಗ್ರಹಣೆಗಾಗಿ​ ನನ್ನ ಕ್ಯಾನ್ವಾಸ್​ ಸ್ಯಾಂಡ್​ ಆರ್ಟ್​ಅನ್ನು ಹರಾಜಿಗಿಟ್ಟಿದ್ದೇನೆ. ಆಸಕ್ತರು ಟ್ವಿಟ್ಟರ್​ನಲ್ಲಿ ನೇರ ಸಂದೇಶದ ಮೂಲಕ ನನ್ನನ್ನು ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ.

ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್

ಇಲ್ಲಿಯವರೆಗೆ ಅನೇಕ ಸಂದೇಶಗಳನ್ನು ಬಂದಿವೆ ಎನ್ನುವ ಅವರು, ಒಳ್ಳೆಯ ಬೆಲೆಗೆ ಚಿತ್ರಗಳ ಹರಾಜಿಗೆ ಕಾಯುತ್ತಿದ್ದಾರಂತೆ.

ABOUT THE AUTHOR

...view details