ಕರ್ನಾಟಕ

karnataka

ತೋಟದ ಮನೆಯಲ್ಲಿ ನಾಳೆ ಗಾನ ಗಾರುಡಿಗ ಎಸ್​ಪಿಬಿ ಅಂತ್ಯಕ್ರಿಯೆ

By

Published : Sep 25, 2020, 5:39 PM IST

ಭಾರತೀಯ ಚಿತ್ರರಂಗ ಕಂಡಿರುವ ಅತ್ಯಮೂಲ್ಯ ಗಾಯಕ ಎಸ್​ಪಿ ಬಾಲಸುಬ್ರಹ್ಮಣ್ಯಂ ಇಹಲೋಕ ತ್ಯಜಿಸಿದ್ದು, ಸಂಪ್ರದಾಯದಂತೆ ನಾಳೆ ಅವರ ಅಂತ್ಯಕ್ರಿಯೆ ನಡೆಯಲಿದೆ.

s p balasubrahmanyam cremation
s p balasubrahmanyam cremation

ಚೆನ್ನೈ: ಸಂಗೀತ ದಿಗ್ಗಜ, ಭಾರತೀಯ ಚಿತ್ರರಂಗ ಕಂಡಿರುವ ಖ್ಯಾತ ಗಾಯಕ ಎಸ್​​.ಪಿ ಬಾಲಸುಬ್ರಹ್ಮಣ್ಯಂ(74) ಅವರು ಇಂದು ನಿಧನರಾಗಿದ್ದು, ಅವರ ಅಗಲಿಕೆಗೆ ಇಡೀ ದೇಶ ಕಂಬನಿ ಮಿಡಿದಿದೆ.

ಆಗಸ್ಟ್​ 5ರಂದು ಆಸ್ಪತ್ರೆಗೆ ದಾಖಲಾಗಿದ್ದ ಎಸ್​​ಪಿಬಿ ಇಂದು ಮಧ್ಯಾಹ್ನ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಅವರ ತೋಟದ ಮನೆಯಲ್ಲಿ ಸಕಲ ವಿಧಿ-ವಿಧಾನಗಳ ಮೂಲಕ ನಾಳೆ ಅಂತ್ಯಕ್ರಿಯೆ ನೆರವೇರಲಿದೆ.

ನಾಳೆ ಎಸ್​ಪಿಬಿ ಅಂತ್ಯಕ್ರಿಯೆ

ಎಂಜಿಎಂ ಆಸ್ಪತ್ರೆಯಿಂದ ಎಸ್​ಪಿಬಿ ಪಾರ್ಥಿವ ಶರೀರವನ್ನ ಈಗಾಗಲೇ ಮನೆಗೆ ತರಲಾಗಿದ್ದು, ಸಂಪ್ರದಾಯದಂತೆ ವಿಧಿ-ವಿಧಾನ ನಡೆಸಲಾಗುತ್ತಿದೆ. ಅವರ ನಿವಾಸದಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಅನೇಕ ನಟರು ಎಸ್​ಪಿಬಿ ನಿವಾಸದತ್ತ ತೆರಳಿ ಅಗಲಿದ ಗಾನ ಗಾರುಡಿಗನ ಅಂತಿಮ ದರ್ಶನ ಪಡೆದುಕೊಳ್ಳುತ್ತಿದ್ದಾರೆ.

ABOUT THE AUTHOR

...view details