ಕರ್ನಾಟಕ

karnataka

ETV Bharat / bharat

ತೆಲಂಗಾಣದ ಈ ಸಚಿವರಿಗೆ 5,000 ರೂ. ದಂಡ! ಯಾಕೆ ಗೊತ್ತಾ? - penalty to Telangana minister for illegal hoarding

ಇದೇ ಸೋಮವಾರ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್​ ಅವರ ಜನ್ಮದಿನ ಇರುವುದರಿಂದ, ಈ ಬಗ್ಗೆ ಜಾಹೀರಾತು ಫಲಕ ಹಾಕಿದ್ದ ತೆಲಂಗಾಣದ ಪಶುಸಂಗೋಪನಾ ಸಚಿವ ಟಿ ಶ್ರೀನಿವಾಸ್​ ಯಾದವ್ ಅವರಿಗೆ ಜಿಹೆಚ್‌ಎಂಸಿ ದಂಡ ವಿಧಿಸಿದೆ.

Rs 5,000 penalty slapped on minister for illegal hoarding
ಟಿ ಶ್ರೀನಿವಾಸ್​ ಯಾದವ್

By

Published : Feb 16, 2020, 5:52 PM IST

ಹೈದರಾಬಾದ್(ತೆಲಂಗಾಣ):ಅಕ್ರಮ ಹೋರ್ಡಿಂಗ್​(ಜಾಹೀರಾತು ಫಲಕ) ಹಾಕಿದ್ದಕ್ಕೆ ತೆಲಂಗಾಣದ ಪಶುಸಂಗೋಪನಾ ಸಚಿವ ಟಿ ಶ್ರೀನಿವಾಸ್​ ಯಾದವ್ ​ಅವರಿಗೆ 5,000 ರೂ. ದಂಡ ವಿಧಿಸಲಾಗಿದೆ.

ಹೈದರಾಬಾದ್ ಮಹಾನಗರ ಪಾಲಿಕೆ (ಜಿಹೆಚ್‌ಎಂಸಿ)ನ ಸೆಂಟ್ರಲ್ ಎನ್‌ಫೋರ್ಸ್‌ಮೆಂಟ್ ಸೆಲ್(ಸಿಇಸಿ), ಸಾಮಾಜಿಕ ಮಾಧ್ಯಮಗಳಿಂದ ಕೇಳಿಬಂದಿದ್ದ ದೂರುಗಳ ಆಧಾರದ ಮೇಲೆ ಈ ದಂಡ ವಿಧಿಸಲಾಗಿದೆ ಎಂದು ಜಿಹೆಚ್‌ಎಂಸಿ ಮೂಲಗಳು ತಿಳಿಸಿವೆ. ಹೀಗಾಗಿ ಸಚಿವರು ದಂಡ ವಿಧಿಸಬೇಕಾಗಿ ಬಂದಿದೆ.

ಇದೇ ಸೋಮವಾರ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್​ ಅವರ ಜನ್ಮದಿನ ಇರುವುದರಿಂದ ಜಾಹೀರಾತು ಫಲಕ ಹಾಕಲಾಗಿತ್ತು ಎಂದು ತಿಳಿದುಬಂದಿದೆ.

ABOUT THE AUTHOR

...view details