ಕರ್ನಾಟಕ

karnataka

ETV Bharat / bharat

ಫಲಿತಾಂಶದಲ್ಲಿ ಹಸ್ತಕ್ಷೇಪ ಮಾಡಿದ್ರೆ ರಕ್ತ ಹರಿಯುತ್ತೆ: ಉಪೇಂದ್ರ ಕುಶ್ವಾಹ ಎಚ್ಚರಿಕೆ​ - undefined

ಆರ್​ ಎಲ್​ಎಸ್​ಪಿ ನಾಯಕ ಉಪೇಂದ್ರ ಕುಶ್ವಾಹ , ಎನ್​ಡಿಎ ನಾಯಕರಿಗೆ ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇನೆ, ಈ ಬಗ್ಗೆ ಜನರು ಕೋಪಗೊಂಡಿದ್ದಾರೆ. ರಸ್ತೆಗಳಲ್ಲಿ ರಕ್ತ ಹರಿದರೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂದಿದ್ದಾರೆ.

ಉಪೇಂದ್ರ ಕುಶ್ವಾಹ

By

Published : May 22, 2019, 5:37 AM IST

ಪಾಟ್ನಾ: ಮತಯಂತ್ರಗಳ ವಿರುದ್ಧ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೆ, ಆರ್​ಎಲ್​ಎಸ್​ಪಿ ನಾಯಕ ಉಪೇಂದ್ರ ಕುಶ್ವಾಹ ವಿವಾದಾದ್ಮತಕ ಹೇಳಿಕೆ ನೀಡಿದ್ದಾರೆ.

ಈ ಚುನಾವಣೆ ಫಲಿತಾಂಶದಲ್ಲಿ ಯಾರಾದರೂ ಹಸ್ತಕ್ಷೇಪ ಮಾಡಿದ್ದೇ ಆದಲ್ಲಿ ರಸ್ತೆಗಳಲ್ಲಿ ರಕ್ತ ಹರಿಯುವುದು ಖಚಿತ ಎಂದು ಹೇಳಿದ್ದಾರೆ.

ಮಹಾಘಟಬಂಧನದೊಂದಿಗೆ ಕೈ ಜೋಡಿಸಿರುವ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಹೇಳಿಕೆ ನೀಡಿದ್ದಾರೆ. ಈ ಮೊದಲು ಮತಗಟ್ಟೆಗಳನ್ನು ಲೂಟಿ ಮಾಡುತ್ತಿದ್ದನ್ನು ಕೇಳಿದ್ದೇವೆ. ಆದರೆ, ಈ ಬಾರಿ ಫಲಿತಾಂಶವನ್ನೇ ಲೂಟಿ ಮಾಡುವ ಸಂಶಯ ಉಂಟಾಗಿದೆ. ಎನ್​ಡಿಎ ನಾಯಕರಿಗೆ ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇನೆ, ಈ ಬಗ್ಗೆ ಜನರು ಕೋಪಗೊಂಡಿದ್ದಾರೆ. ರಸ್ತೆಗಳಲ್ಲಿ ರಕ್ತ ಹರಿದರೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂದಿದ್ದಾರೆ.

ಚುನಾವಣೋತ್ತರ ಸಮೀಕ್ಷೆಯ ಬಗ್ಗೆಯೂ ಅವರ ಅಸಮಾಧಾನ ವ್ಯಕ್ತಪಡಿಸಿದರು.ಇನ್ನು ವಿಪಕ್ಷಗಳಿಂದ ಮತಯಂತ್ರಗಳ ಬಗ್ಗೆ ಭಾರಿ ಆಕ್ಷೇಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ಸಂಬಂಧದ ದೂರುಗಳನ್ನು ಆಲಿಸಲು 24 ಗಂಟೆಗಳ ಕಂಟ್ರೋಲ್​ರೂಂ ಸೇವೆ ಆರಂಭಿಸಿದೆ.

For All Latest Updates

TAGGED:

ABOUT THE AUTHOR

...view details