ರಂಗಾರೆಡ್ಡಿ: ತೆಲಂಗಾಣದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಪ್ರವಾಹ ಪರಿಸ್ಥಿತಿ ತಂದಿಟ್ಟಿದ್ದು, ಕೋಪಗೊಂಡ ಸ್ಥಳೀಯರು ಕಾರ್ಪೊರೇಟರ್ ಮೇಲೆ ಹಲ್ಲೆ ಮಾಡಿರುವ ಘಟನೆ ರಂಗಾರೆಡ್ಡಿ ಜಿಲ್ಲೆಯ ಹಯತ್ನಗರದಲ್ಲಿ ನಡೆದಿದೆ.
ಪ್ರವಾಹದಲ್ಲಿ ಮುಳುಗಿದ ಕಾಲೋನಿಗಳು: ಕೆರಳಿದ ಜನರಿಂದ ಕಾರ್ಪೊರೇಟರ್ ಮೇಲೆ ಹಲ್ಲೆ - Residents attacks corporater
ಪ್ರವಾಹದ ಅಬ್ಬರಕ್ಕೆ ಹೈದರಾಬಾದ್ ವ್ಯಾಪ್ತಿಯಲ್ಲಿ ಬರುವ ರಂಗಾರೆಡ್ಡಿ ಜಿಲ್ಲೆಯಲ್ಲಿನ ಹಲವು ಕಾಲೋನಿಗಳು ಹಾಗೂ ಜಮೀನುಗಳು ಜಲಾವೃತವಾಗಿವೆ. ಕಾಲುವೆ, ಚರಂಡಿ ಪ್ರದೇಶಗಳನ್ನು ಮುಚ್ಚಿ, ಅದರ ಮೇಲೆ ಕಟ್ಟಡಗಳನ್ನು ನಿರ್ಮಿಸಿರುವುದೇ ಈ ಅವಾಂತರಕ್ಕೆ ಕಾರಣವೆಂದು ಜನರು ಕಾರ್ಪೊರೇಟರ್ ಮೇಲೆ ಹಲ್ಲೆ ಮಾಡಿದ್ದಾರೆ.
![ಪ್ರವಾಹದಲ್ಲಿ ಮುಳುಗಿದ ಕಾಲೋನಿಗಳು: ಕೆರಳಿದ ಜನರಿಂದ ಕಾರ್ಪೊರೇಟರ್ ಮೇಲೆ ಹಲ್ಲೆ Residents attack corporater in Rangareddy district](https://etvbharatimages.akamaized.net/etvbharat/prod-images/768-512-9220226-thumbnail-3x2-megha.jpg)
ಕಾರ್ಪೋರೇಟರ್ ಮೇಲೆ ಸ್ಥಳೀಯರಿಂದ ಹಲ್ಲೆ
ಕಾರ್ಪೊರೇಟರ್ ಮೇಲೆ ಸ್ಥಳೀಯರಿಂದ ಹಲ್ಲೆ
ಪ್ರವಾಹದ ನೀರಿನಲ್ಲಿ ಹೈದರಾಬಾದ್ ವ್ಯಾಪ್ತಿಯಲ್ಲಿ ಬರುವ ರಂಗಾರೆಡ್ಡಿ ಜಿಲ್ಲೆಯಲ್ಲಿನ ಹಲವು ಕಾಲೋನಿಗಳು ಹಾಗೂ ಜಮೀನುಗಳು ಜಲಾವೃತವಾಗಿವೆ. ಕಾಲುವೆ, ಚರಂಡಿ ಪ್ರದೇಶಗಳನ್ನು ಮುಚ್ಚಿ, ಅದರ ಮೇಲೆ ಕಟ್ಟಡಗಳನ್ನು ನಿರ್ಮಿಸಿರುವುದೇ ಈ ಅವಾಂತರಕ್ಕೆ ಕಾರಣವೆಂದು ಜನರು ಕಾರ್ಪೊರೇಟರ್ ತಿರುಮಲ ರೆಡ್ಡಿ ಅವರ ಮನೆಗೆ ನುಗ್ಗಿದ್ದಾರೆ.
ಈ ಹಿಂದೆಯೇ ಇದರ ಬಗ್ಗೆ ದೂರುಗಳನ್ನು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದಿದ್ದಕ್ಕೆ ಜನರು ಕೋಪಗೊಂಡು ತಿರುಮಲ ರೆಡ್ಡಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.