ನವದೆಹಲಿ:ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧ ದಂಡನಾತ್ಮಕ ಪ್ರತಿಕ್ರಿಯೆ ತಂತ್ರವನ್ನು ನಾವು ರೂಪಿಸಿದ್ದೇವೆ ಎಂದು ಭಾರತೀಯ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಮನೋಜ್ ಮುಕುಂದ್ ನರವನೆ ಎಚ್ಚರಿಸಿದ್ದಾರೆ.
ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ನಿಲ್ಲಿಸದಿದ್ದರೆ, ಭಯೋತ್ಪಾದನೆಯ ಮೂಲಗಳ ಮೇಲೆ ಪೂರ್ವಭಾವಿಯಾಗಿ ದಾಳಿ ನಡೆಸುವ ಯೋಜನೆ ನಮಗೆ ತಿಳಿದಿದೆ. ಪಾಕಿಸ್ತಾನ ಪ್ರಾಯೋಜಿಸಿದ ಅಥವಾ ಬೆಂಬಲಿಸುವ ಯಾವುದೇ ಭಯೋತ್ಪಾದನೆ ಕೃತ್ಯಕ್ಕೆ ಪ್ರತಿಕ್ರಿಯಿಸಲು ಹಲವು ಆಯ್ಕೆಗಳು ನಮ್ಮ ಮುಂದಿವೆ ಎಂದು ಸೂಚ್ಯವಾಗಿ ಹೇಳಿದ್ದಾರೆ.