ಕರ್ನಾಟಕ

karnataka

ETV Bharat / bharat

ವೇತನ ಪಾವತಿಸದ ಆರ್‌ಬಿಟಿವಿ ಆಸ್ಪತ್ರೆ:  ವೈದ್ಯರ ಪ್ರತಿಭಟನೆ, ಸೋಂಕಿತರ ಗೋಳಾಟ - ಕೊರೊನಾ ರೋಗಗಳಿಗೆ ಚಿಕಿತ್ಸೆ

ಕಳೆದ ಹಲವಾರು ದಿನಗಳಿಂದ ಆಸ್ಪತ್ರೆಯೊಳಗೆ ನಿರಂತರವಾಗಿ ಪ್ರತಿಭಟನೆ ಮಾಡಲಾಗುತ್ತಿದೆ. ಈ ಆಸ್ಪತ್ರೆ ಉತ್ತರ ದೆಹಲಿ ಮಹಾನಗರ ಪಾಲಿಕೆಯ ಅಡಿಯಲ್ಲಿದ್ದು, ಕೊರೊನಾ ರೋಗಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

protest
protest

By

Published : Jul 7, 2020, 12:35 PM IST

ನವದೆಹಲಿ:ಕಿಂಗ್ಸ್‌ವೇ ಕ್ಯಾಂಪ್‌ನಲ್ಲಿರುವ ರಾಜನ್ ಬಾಬು ಆಸ್ಪತ್ರೆಯಲ್ಲಿ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ, ಲ್ಯಾಬ್ ತಂತ್ರಜ್ಞರು ಹಾಗೂ ಇತರ ನೌಕರರು ನಿತ್ಯ ಒಂದು ಗಂಟೆ ಸಾಂಕೇತಿಕ ಮುಷ್ಕರ ನಡೆಸುತ್ತಿದ್ದಾರೆ.

ಕಳೆದ ಹಲವಾರು ದಿನಗಳಿಂದ ಆಸ್ಪತ್ರೆಯೊಳಗೆ ನಿರಂತರವಾಗಿ ಪ್ರತಿಭಟನೆ ಮಾಡಲಾಗುತ್ತಿದೆ. ಆದರೂ ಇದಕ್ಕೆ ಆಡಳಿತ ಸ್ಪಂದಿಸುತ್ತಿಲ್ಲ ಎನ್ನಲಾಗಿದೆ. ಈ ಆಸ್ಪತ್ರೆ ಉತ್ತರ ದೆಹಲಿ ಮಹಾನಗರ ಪಾಲಿಕೆಯ ಅಡಿಯಲ್ಲಿದ್ದು, ಕೊರೊನಾ ರೋಗಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ 3 ತಿಂಗಳಿಂದ ವೇತನ ನಿಡಲಿಲ್ಲ ಎಂದು ಪ್ರತಿಭಟನಾಕಾರರು ಹೇಳುತ್ತಿದ್ದಾರೆ. ಬೇರೆ ಆದಾಯದ ಮೂಲಗಳಿಲ್ಲದ ಕಾರಣ ಮತ್ತು ಸಂಬಳ ಲಭ್ಯವಿಲ್ಲದಿರುವ ಹಿನ್ನೆಲೆ ಜೀವನ ಸಾಗಿಸುವುದೇ ಕಷ್ಟ ಎನ್ನುತ್ತಿದ್ದು ವೇತನ ನೀಡುವಂತೆ ಒತ್ತಾಯಿಸುತ್ತಿದ್ದಾರೆ.

ಸಮಸ್ಯೆಗಳನ್ನ ಶೀಘ್ರವೇ ಪರಿಹಾರ ಮಾಡದಿದ್ದರೆ ಮುಷ್ಕರದ ಸಮಯವನ್ನು ಹೆಚ್ಚಿಸುತ್ತೇವೆಂದು ವೈದ್ಯರು ಆಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ. ಅತ್ತ ರೋಗಿಗಳು ಪ್ರತಿಭಟನಾ ಅವಧಿಯಲ್ಲಿ ಸಮಸ್ಯೆ ಅನುಭವಿಸಬೇಕಾಗಿದೆ.

ABOUT THE AUTHOR

...view details