ಕರ್ನಾಟಕ

karnataka

ETV Bharat / bharat

ಇಎಂಐ ಕಟ್ಟುವವರಿಗೆ 3 ತಿಂಗಳು ರಿಲೀಫ್‌: ವೈಯಕ್ತಿಕ, ಗೃಹ, ವಾಹನ ಸಾಲ ಮುಂದೂಡಿಕೆ - ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿ

ಕೊರೊನಾ ಪರಿಣಾಮ ದೇಶದ ಅರ್ಥಿಕ ಸ್ಥಿತಿ ಕುಗ್ಗಿರುವ ಹಿನ್ನೆಲೆಯಲ್ಲಿ ಇಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ದೆಹಲಿಯಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಿದರು. ರಾಷ್ಟ್ರೀಕೃತ, ಸಹಕಾರಿ ಮತ್ತು ಗ್ರಾಮೀಣ ಬ್ಯಾಂಕುಗಳ ಎಲ್ಲಾ ಸಾಲ ಗಳ ಇಎಂಐ ಅನ್ನು ಜೂನ್‌ವರೆಗೆ ಆರ್‌ಬಿಐ ಮುಂದೂಡಿದೆ.

ಶಕ್ತಿಕಾಂತ ದಾಸ್
ಶಕ್ತಿಕಾಂತ ದಾಸ್

By

Published : Mar 27, 2020, 10:37 AM IST

Updated : Mar 27, 2020, 1:13 PM IST

ದೆಹಲಿ: ಸದ್ಯ ದೇಶದ ಅರ್ಥಿಕ ಸ್ಥಿತಿಗಳನ್ನು ಅವಲೋಕಿಸಿರುವ ಆರ್‌ಬಿಐ, ರೆಪೋ ದರ 5.1 ಬೇಸಿಸ್​​ ಪಾಯಿಂಟ್‌ಗಳಿಂದ 4.4% ಕ್ಕೆ ಇಳಿಸಿದ್ದು, ರಿವರ್ಸ್ ರೆಪೋ ದರವನ್ನು 90 ಬೇಸಿಸ್​​ ಪಾಯಿಂಟ್‌ಗಳಿಂದ 4% ಕ್ಕೆ ಇಳಿಸಿದೆ. ಜೊತೆಗೆ ಇವಿಎಂ ಕಟ್ಟುವವರು, ವೈಯಕ್ತಿಕ, ಗೃಹ, ವಾಹನ ಸಾಲ ಕಟ್ಟುವವರಿಗೆ 3 ತಿಂಗಳ ಕಾಲ ಬಿಗ್‌ ರಿಲೀಫ್ ನೀಡಿ ಮಹತ್ವದ ನಿರ್ಧಾರ ಪ್ರಕಟಿಸಿದೆ.

ದೆಹಲಿಯ ಆರ್‌ಬಿಐ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಆರ್‌ಬಿಐ ಗವರ್ನರ್‌ ಶಕ್ತಿಕಾಂತ್ ದಾಸ್ ಈ ಮಹತ್ವದ ವಿಚಾರ ತಿಳಿಸಿದರು.

ರೆಪೋ ಮತ್ತು ರಿವರ್ಸ್‌ ರೆಪೋ ದರ ಕಡಿತ ಕಾರಣ ಬ್ಯಾಂಕುಗಳ ಸಾಲದ ಮೇಲಿನ ಬಡ್ಡಿದರ ಕಡಿತ ಮಾಡಲಾಗಿದ್ದು, ರಿಸರ್ವ್ ಬ್ಯಾಂಕ್​ ಸದ್ಯದ ಅರ್ಥಿಕ ಸ್ಥಿತಿಗಳ ಕುರಿತು ಗಮನಹರಿಸುತ್ತಿದೆ ಎಂದು ಶಕ್ತಿಕಾಂತ ದಾಸ್ ತಿಳಿಸಿದರು.

ಕೊರೊನಾ ವೈರಸ್​ ಕುರಿತು ಮಾತನಾಡಿದ ಅವರು, ಕೋವಿಡ್​-19 ಪರಿಣಾಮ ಅನೇಕ ರೀತಿಯಲ್ಲಿ ನಷ್ಟ ಉಂಟಾಗಿದ್ದು, ಹೀಗಾಗಿ ನಾವು ಮಹತ್ವದ ಕೆಲ ನಿರ್ಧಾರಗಳನ್ನು ಕೈಗೊಂಡಿದ್ದೇವೆ. ಈಗಾಗಲೇ ನಾವು ಸಣ್ಣ ಉದ್ಯಮಗಳ ನಷ್ಟದ ಕುರಿತು ಗಮನ ಹರಿಸುತ್ತಿದ್ದೇವೆ. ಕೊರೊನಾ ವೈರಸ್​ ಕೂಡ ಅರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದರು.

Last Updated : Mar 27, 2020, 1:13 PM IST

For All Latest Updates

ABOUT THE AUTHOR

...view details