ಕರ್ನಾಟಕ

karnataka

ETV Bharat / bharat

ನನ್ನ ತಂದೆ ಜೊತೆ ಮಾತನಾಡಲು ಅವಕಾಶ ಮಾಡಿಕೊಡಿ: ರಾಜೀವ್​ ಗಾಂಧಿ ಹತ್ಯೆ ಅಪರಾಧಿ - ಮುರುಗನ್

ಮುರುಗನ್ ತಮ್ಮ ತಂದೆಯ ಅನಾರೋಗ್ಯದ ಬಗ್ಗೆ ಸಿಎಂ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರನ್ನು ತಮ್ಮ ವಕೀಲರ ಮೂಲಕ ಕೋರಿದ್ದಾರೆ. ವಿಡಿಯೋ ಕರೆ ಮೂಲಕ ತಂದೆಯನ್ನು ಸಂಪರ್ಕಿಸಲು ಅವಕಾಶ ನೀಡುವಂತೆ ಅವರು ಸಿಎಂಗೆ ಮನವಿ ಮಾಡಿದ್ದಾನೆ.

Rajiv Gandhi assassination convict seeks help to contact ailing father via video call
ರಾಜೀವ್​ ಗಾಂಧಿ ಹತ್ಯೆ ಅಪರಾಧಿ

By

Published : Apr 27, 2020, 11:03 AM IST

ವೆಲ್ಲೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಂದೆಯನ್ನು ವಿಡಿಯೋ ಕಾಲ್ ಮೂಲಕ ಸಂಪರ್ಕಿಸುವಂತೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಅಪರಾಧಿಗಳಲ್ಲಿ ಒಬ್ಬರಾದ ಮುರುಗನ್, ತಮಿಳುನಾಡು ಸಿಎಂಗೆ ಮನವಿ ಮಾಡಿದ್ದಾನೆ.

ಮೂಲಗಳ ಪ್ರಕಾರ, ಮುರುಗನ್ ತಮ್ಮ ತಂದೆಯ ಅನಾರೋಗ್ಯದ ಬಗ್ಗೆ ಸಿಎಂ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರನ್ನು ತಮ್ಮ ವಕೀಲರ ಮೂಲಕ ಕೋರಿದ್ದಾರೆ. ವಿಡಿಯೋ ಕರೆ ಮೂಲಕ ತಂದೆಯನ್ನು ಸಂಪರ್ಕಿಸಲು ಅವಕಾಶ ನೀಡುವಂತೆ ಅವರು ಸಿಎಂಗೆ ಮನವಿ ಮಾಡಿದ್ದಾನೆ.

ಮುರುಗನ್ ಕಳೆದ 28 ವರ್ಷಗಳಿಂದ ವೆಲ್ಲೂರು ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದು, ಅವರ ತಂದೆ ಕ್ಯಾನ್ಸರ್​ನಿಂದಾಗಿ ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದಾರೆ.

ಕೊರೊನಾ ಹಿನ್ನೆಲೆ ವೆಲ್ಲೂರ್ ಸೆಂಟ್ರಲ್ ಜೈಲಿನಲ್ಲಿರುವ ಅನೇಕ ಕೈದಿಗಳು ತಮ್ಮ ಸಂಬಂಧಿಕರೊಂದಿಗೆ ವಿಡಿಯೋ ಕರೆ ಮೂಲಕ ಮಾತನಾಡುತ್ತಿದ್ದಾರೆ. ಅಂತೆಯೇ ನಮಗೂ ಈ ಅವಕಾಶ ಕಲ್ಪಿಸಿಕೊಡಿ ಎಂದು ಮುರುಗನ್​ ಮನವಿ ಮಾಡಿಕೊಂಡಿದ್ದಾನೆ.

ABOUT THE AUTHOR

...view details