ಕರ್ನಾಟಕ

karnataka

ETV Bharat / bharat

ರೈಸ್​-2020 ಶೃಂಗ: ಕೃತಕ ಬುದ್ಧಿಮತ್ತೆ ವಿಭಾಗದಲ್ಲಿ ಭಾರತ ವಿಶ್ವದ ಹಬ್​ ಆಗಲು ಬದ್ಧ-ಮೋದಿ - ಎಐ ಶೃಂಗಸಭೆ

ರೈಸ್ -2020 ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದ್ದು, ಆರ್ಟಿಫಿಶಿಯಲ್​ ಇಂಟಲಿಜೆನ್ಸ್​ ವಿಭಾಗದಲ್ಲಿ ಭಾರತವನ್ನು ವಿಶ್ವದ ಹಬ್ ಆಗಿ ಮಾಡಲು ಬದ್ಧವಾಗಿದೆ ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರೈಸ್​-2020 ಶೃಂಗಸಭೆ ಉದ್ಘಾಟನೆ
ರೈಸ್​-2020 ಶೃಂಗಸಭೆ ಉದ್ಘಾಟನೆ

By

Published : Oct 8, 2020, 11:49 AM IST

ಪ್ರಧಾನಿ ನರೇಂದ್ರ ಮೋದಿ ಅವರು 5 ದಿನಗಳ ಕಾಲ ನಡೆಯುತ್ತಿರುವ ಆರ್​ಎಐಎಸ್​ಇ-2020 (ರೈಸ್​ 2020) ಆರ್ಟಿಫಿಶಿಯಲ್​ ಇಂಟಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಶೃಂಗಸಭೆಯನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, "ಈ ವಿಭಾಗದಲ್ಲಿ ಭಾರತವನ್ನು ವಿಶ್ವದ ಪ್ರಮುಖ ತಾಣವನ್ನಾಗಿ ಮಾಡಲು ಬದ್ಧವಾಗಿರುವುದಾಗಿ ಹೇಳಿದ್ದಾರೆ. ಆರ್ಟಿಫಿಶಿಯಲ್​ ಇಂಟಲಿಜೆನ್ಸ್​ (ಎಐ) ಅನ್ನು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವಿಕೆಗೆ ಸರಿಯಾಗಿ ಬಳಕೆ ಮಾಡಲಾಗುವುದು" ಎಂದರು.

"ಇತಿಹಾಸದ ಪ್ರತಿಯೊಂದು ಹಂತದಲ್ಲೂ ಭಾರತವು ಜ್ಞಾನ ಮತ್ತು ಕಲಿಕೆಯಲ್ಲಿ ಜಗತ್ತನ್ನು ಮುನ್ನಡೆಸಿದೆ. ಇಂದಿನ ಐಟಿ ಯುಗದಲ್ಲೂ ಭಾರತವು ಅತ್ಯುತ್ತಮ ಕೊಡುಗೆಗಳನ್ನು ನೀಡುತ್ತಿದೆ. ಭಾರತವನ್ನು ಎಐ ವಿಶ್ವದ ಕೇಂದ್ರವನ್ನಾಗಿ ಮಾಡುವ ಬದ್ಧತೆಯನ್ನು ಹೊಂದಿದೆ" ಎಂದು ಹೇಳಿದರು.

"ಭಾರತವು ಜಾಗತಿಕ ಐಟಿ ಸೇವೆಗಳ ಉದ್ಯಮದ ಶಕ್ತಿ ಕೇಂದ್ರವೆಂದು ಸಾಬೀತಾಗಿದೆ. ನಾವು ಡಿಜಿಟಲ್ ಮಟ್ಟದಲ್ಲಿ ಉತ್ಕೃಷ್ಟತೆಯನ್ನು ಸಾಧಿಸುತ್ತೇವೆ. ಭಾರತವು ಎಐಗೆ ಜಾಗತಿಕ ಕೇಂದ್ರವಾಗಬೇಕೆಂದು ನಾವು ಬಯಸುತ್ತೇವೆ. ಅನೇಕ ಭಾರತೀಯರು ಈಗಾಗಲೇ ಈ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮ ವಿಧಾನವು ತಂಡದ ಕೆಲಸ, ವಿಶ್ವಾಸ, ಸಹಯೋಗ, ಜವಾಬ್ದಾರಿ ಮತ್ತು ಒಳಗೊಳ್ಳುವಿಕೆಯ ಪ್ರಮುಖ ತತ್ವಗಳಿಂದ ನಿಯಂತ್ರಿಸಲ್ಪಡುತ್ತದೆ ”ಎಂದು ಮೋದಿ ಹೇಳಿದರು.

ಈ ಬಗ್ಗೆ ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್​ ಹೇಳಿಕೆ ನೀಡಿದ್ದು, "ದೇಶದ ಎಐ ಪರಿಸರ ವ್ಯವಸ್ಥೆಯನ್ನು ಮುಂದೆ ಕೊಂಡೊಯ್ಯಲು, ನುರಿತ ವೃತ್ತಿಪರರನ್ನು ಉತ್ತೇಜಿಸುವಲ್ಲಿ ಭಾರತದ ಜನಸಂಖ್ಯಾ ಲಾಭಾಂಶದ ಸಂಪನ್ಮೂಲ ಪ್ರಮುಖ ಪಾತ್ರ ವಹಿಸುತ್ತದೆ" ಎಂದಿದ್ದಾರೆ.

ಸ್ವತಂತ್ರ ಅಧ್ಯಯನಗಳ ಪ್ರಕಾರ, ಭಾರತದ ವಾರ್ಷಿಕ ಬೆಳವಣಿಗೆಯ ದರವನ್ನು 1.3% ಹೆಚ್ಚಿಸುವ ಮತ್ತು 2035ರ ವೇಳೆಗೆ ದೇಶದ ಆರ್ಥಿಕತೆಗೆ 957 ಶತಕೋಟಿ ಡಾಲರ್‌ಗಳನ್ನು ಸೇರಿಸುವ ಸಾಮರ್ಥ್ಯವನ್ನು ಎಐ ಹೊಂದಿದೆ.

"ಜಾಗತಿಕ ಮಟ್ಟದಲ್ಲಿ, ಎಐ 2030ರ ವೇಳೆಗೆ 15.7 ಟ್ರಿಲಿಯನ್ ಯುಎಸ್​ ಉತ್ಪಾದಕತೆಯನ್ನು ಉಂಟುಮಾಡುತ್ತದೆ ಮತ್ತು ಇದು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಮಾತ್ರವಲ್ಲದೆ ವಿಶ್ವದಾದ್ಯಂತ ಲಕ್ಷಾಂತರ ಜನರ ಜೀವನೋಪಾಯವನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದೆ" ಎಂದು ಡಾ.ಅರವಿಂದ್. ಕೃಷ್ಣ ಹೇಳಿದರು.

ಉದ್ಯಮಿ ಮುಖೇಶ್ ಅಂಬಾನಿ ಮಾತನಾಡಿದ್ದು, "1.3 ಬಿಲಿಯನ್ ಭಾರತೀಯರು ಡಿಜಿಟಲ್ ಸಬಲೀಕರಣಗೊಂಡಾಗ, ವೇಗದ ಬೆಳವಣಿಗೆ, ಉತ್ತಮ ಜೀವನ ಮಟ್ಟ ಮತ್ತು ಉತ್ತಮ ಅವಕಾಶಗಳನ್ನು ಸೃಷ್ಟಿಸಲು ಮುಂದಾಗುತ್ತಾರೆ" ಎಂದಿದ್ದಾರೆ.

ಅಷ್ಟೇ ಅಲ್ಲದೆ, ಭಾಷೆಯ ಅಡೆತಡೆಗಳನ್ನು ಮುರಿಯಲು ಎಐ ಸಹಾಯ ಮಾಡುತ್ತದೆ ಎಂದು ಪ್ರೊ. ರಾಜ್ ರೆಡ್ಡಿ ಹೇಳಿದರು.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಎಐ ಮೂಲಕ ಸಾಮಾಜಿಕ ಪರಿವರ್ತನೆ, ಸೇರ್ಪಡೆ ಮತ್ತು ಸಬಲೀಕರಣಕ್ಕಾಗಿ ಭಾರತದ ದೃಷ್ಟಿ ಮತ್ತು ಮಾರ್ಗಸೂಚಿಯನ್ನು ಜಗತ್ತಿಗೆ ತಿಳಿಸಲು ಕೃತಕ ಬುದ್ಧಿಮತ್ತೆಯ ಕುರಿತ ಸಭೆ ಆಯೋಜಿಸಿದೆ.

ಈ ಮಹತ್ವದ ಸಭೆಯಲ್ಲಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಪದ್ಮಭೂಷಣ ಮತ್ತು ಟ್ಯೂಮಿಂಗ್ ಪ್ರಶಸ್ತಿ ಪುರಸ್ಕೃತ ಪ್ರೊ. ರಾಜ್ ರೆಡ್ಡಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷರಾದ ಮುಖೇಶ್ ಅಂಬಾನಿ, ಐಬಿಎಂ ಇಂಡಿಯಾದ ಸಿಇಒ ಡಾ.ಅರವಿಂದ ಕೃಷ್ಣ, ಎನ್‌ಐಟಿಐ ಆಯೋಗದ ಸಿಇಒ ಅಮಿತಾಬ್​ ಕಾಂತ್, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಕಾರ್ಯದರ್ಶಿ ಅಜಯ್ ಪ್ರಕಾಶ್ ಸಾಹ್ನಿ ಭಾಗಿಯಾಗಿದ್ದರು.

ಶೃಂಗಸಭೆಯಲ್ಲಿ 45 ಅಧಿವೇಶನಗಳು ನಡೆಯಲಿದ್ದು, ಶೈಕ್ಷಣಿಕ, ಕೈಗಾರಿಕೆ ಮತ್ತು ಸರ್ಕಾರದ ಸುಮಾರು 300 ಭಾಷಣಕಾರರು ಭಾಗವಹಿಸುತ್ತಾರೆ. ಅಕ್ಟೋಬರ್ 5-9ರವರೆಗೆ ನಡೆಯುತ್ತಿರುವ ಮೆಗಾ ಡಿಜಿಟಲ್ ಶೃಂಗಸಭೆಯಲ್ಲಿ 140 ದೇಶಗಳ 61,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ.

ABOUT THE AUTHOR

...view details