ತಿರುಪತ್ತೂರು (ತಮಿಳುನಾಡು):ತಿರುಪತ್ತೂರು ಎಸ್ಪಿ ವಿಜಯ್ ಕುಮಾರ್ ಅವರು ಟ್ವಿಟ್ಟರ್ ಖಾತೆಯಲ್ಲಿ ಫೀಡ್ಬ್ಯಾಕ್ ಸೆಲ್ ತೆರೆದಿರುವ ಕುರಿತು ಭಾರತೀಯ ಕ್ರಿಕೆಟಿಗ ಸುರೇಶ್ ರೈನಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಿರುಪತ್ತೂರು ಎಸ್ಪಿ ಫೀಡ್ಬ್ಯಾಕ್ ಐಡಿಯಾಗೆ ಕ್ರಿಕೆಟಿಗ ಸುರೇಶ್ ರೈನಾ ಕ್ಲೀನ್ ಬೌಲ್ಡ್ - Raina lauds Tirupattur SP Vijay Kumar
ಫೀಡ್ಬ್ಯಾಕ್ ಸೆಲ್ ತೆರದ ಬಗ್ಗೆ ತಮಿಳುನಾಡಿನ ತಿರುಪತ್ತೂರು ಎಸ್ಪಿ ವಿಜಯ್ ಕುಮಾರ್ಗೆ ಕ್ರಿಕೆಟಿಗ ಸುರೇಶ್ ರೈನಾ ಅವರು ಅಭಿನಂದನೆ ಸಲ್ಲಿಸಿ, 'ಇದು ಖಂಡಿತವಾಗಿಯೂ ಪ್ರಕ್ರಿಯೆಗಳನ್ನು ಮತ್ತಷ್ಟು ಪರಿಷ್ಕರಿಸುವ ಕೆಲಸ ಮಾಡಲು ಮತ್ತು ನಾಗರಿಕರ ಮೇಲೆ ಹೆಚ್ಚು ಪರಿಣಾಮಕಾರಿಯಾಗಲು ಪೊಲೀಸರಿಗೆ ಅನುವು ಮಾಡಿಕೊಡುತ್ತದೆ' ಎಂದು ಶ್ಲಾಘಿಸಿದ್ದಾರೆ.
![ತಿರುಪತ್ತೂರು ಎಸ್ಪಿ ಫೀಡ್ಬ್ಯಾಕ್ ಐಡಿಯಾಗೆ ಕ್ರಿಕೆಟಿಗ ಸುರೇಶ್ ರೈನಾ ಕ್ಲೀನ್ ಬೌಲ್ಡ್ ಫೀಡ್ಬ್ಯಾಕ್ ಸೆಲ್](https://etvbharatimages.akamaized.net/etvbharat/prod-images/768-512-7438301-468-7438301-1591032538054.jpg)
ತಿರುಪತ್ತೂರು ಎಸ್ಪಿ ವಿಜಯ್ ಕುಮಾರ್ ಅವರ ಈ ಕ್ರಮವು ಅತ್ಯದ್ಭುತವಾಗಿದೆ. ಇದು ಖಂಡಿತವಾಗಿಯೂ ಪ್ರಕ್ರಿಯೆಗಳನ್ನು ಮತ್ತಷ್ಟು ಪರಿಷ್ಕರಿಸುವ ಕೆಲಸ ಮಾಡಲು ಮತ್ತು ನಾಗರಿಕರ ಮೇಲೆ ಹೆಚ್ಚು ಪರಿಣಾಮಕಾರಿಯಾಗಲು ಪೊಲೀಸರಿಗೆ ಅನುವು ಮಾಡಿಕೊಡುತ್ತದೆ ಎಂದು ಜಿಲ್ಲಾ ಪೊಲೀಸರ ಈ ಕ್ರಮಕ್ಕೆ ಟ್ವೀಟ್ ಮೂಲಕ ರೈನಾ ಅಭಿನಂದನೆ ಸಲ್ಲಿಸಿದ್ದಾರೆ.
ಈ ಹಿಂದೆ ತಿರುಪತ್ತೂರು ಎಸ್ಪಿ ವಿಜಯ್ ಕುಮಾರ್, ಜಿಲ್ಲಾ ಪೊಲೀಸರು ಸ್ಥಾಪಿಸಿದ ಫೀಡ್ಬ್ಯಾಕ್ ಸೆಲ್ ಬಗ್ಗೆ ಮಾತನಾಡಿ, ಈ ಕಾರ್ಯವಿಧಾನವು ಸ್ಪಂದಿಸುವಿಕೆಯನ್ನು ಹೆಚ್ಚಿಸುತ್ತಿದೆ. ಐಪಿಎಸ್ ಅಸೋಸಿಯೇಷನ್ ಟ್ವಿಟರ್ ಪುಟದಲ್ಲಿ ನಾಗರಿಕರ ಬಗ್ಗೆ ಪೊಲೀಸರ ಹೊಣೆಗಾರಿಕೆಯನ್ನು ಇದು ಎತ್ತಿಹಿಡಿಯುತ್ತಿದೆ ಎಂದು ಹೇಳಿದ್ದರು.