ಹೈದರಾಬಾದ್: ತೆಲಂಗಾಣದಲ್ಲಿ ಎರಡು ದಿನಗಳ ಹಿಂದೆ ಅಬ್ಬರಿಸಿ 50ಕ್ಕೂ ಹೆಚ್ಚು ಜನರನ್ನು ಬಲಿಪಡೆದಿದ್ದ ಪ್ರವಾಹ ನಿನ್ನೆ ಮತ್ತೆ ಆರ್ಭಟಿಸಿದ್ದು, ಬೆಳಗಾಗುವಷ್ಟರಲ್ಲಿ ಹೈದರಾಬಾದ್ನಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ವನಸ್ಥಲಿಪುರಂ, ಎಲ್.ಬಿ ನಗರ್, ಉಪ್ಪಲ್, ಸಿಕಿಂದರಾಬಾದ್, ಖೈರತಾಬಾದ್, ಕುಕಟ್ಪಲ್ಲಿ, ಹೈ-ಟೆಕ್ ಸಿಟಿ, ಮೆಹದಿಪಟ್ಟಣಂ, ಆರಂಘರ್, ಗೋಲ್ಕೊಂಡ, ನಾಗೋಲ್, ಸರೂರ್ ನಗರ್ ಸೇರಿದಂತೆ ಹೈದರಾಬಾದ್ನ ಅನೇಕ ಪ್ರದೇಶಗಳ ರಸ್ತೆಗಳು, ಕಾಲೋನಿಗಳು ಜಲಾವೃತವಾಗಿದ್ದು, ವಾಹನಗಳು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿವೆ.