ಕರ್ನಾಟಕ

karnataka

ETV Bharat / bharat

ಔರಂಗಾಬಾದ್‌ದಲ್ಲಿ ವಲಸೆ ಕಾರ್ಮಿಕರ ಮೇಲೆ ಹರಿದ ರೈಲು, ದುರ್ಘಟನೆಗೆ ಪ್ರಧಾನಿ ಬೇಸರ - 16 ವಲಸೆ ಕಾರ್ಮಿಕರು

ಮಹಾರಾಷ್ಟ್ರದ ಔರಂಗಾಬಾದ್​ನಲ್ಲಿ ಬೆಳ್ಳಂಬೆಳಗ್ಗೆ ಸಂಭವಿಸಿದ ದುರಂತಕ್ಕೆ ಪ್ರಧಾನಿ ಮೋದಿ ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.

Prime Minister Narendra Modi
Prime Minister Narendra Modi

By

Published : May 8, 2020, 9:45 AM IST

Updated : May 8, 2020, 9:55 AM IST

ನವದೆಹಲಿ:ಮಹಾರಾಷ್ಟ್ರದ ಔರಂಗಾಬಾದ್​​ನಿಂದ ಮಧ್ಯಪ್ರದೇಶಕ್ಕೆ ತೆರಳುತ್ತಿದ್ದ 16 ವಲಸೆ ಕಾರ್ಮಿಕರ ಮೇಲೆ ಗೂಡ್ಸ್​ ರೈಲು ಹರಿದು ಸಂಭವಿಸಿದ ಸಾವುನೋವಿಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.

ಕಾರ್ಮಿಕರ ಪ್ರಾಣಹಾನಿ ದುಃಖ ತರಿಸಿದೆ. ಘಟನೆ ನಡೆಯುತ್ತಿದ್ದಂತೆ ಕೇಂದ್ರ ರೈಲ್ವೆ ಸಚಿವ ಪಿಯೂಷ್​ ಗೋಯಲ್​ ಜತೆ ಮಾತನಾಡಿ ಮಾಹಿತಿ ಪಡೆದುಕೊಂಡಿದ್ದೇನೆ. ಎಲ್ಲ ರೀತಿಯ ಸಹಕಾರ ನೀಡಲಾಗುವುದು ಪ್ರಧಾನಿ ಮೋದಿ ಟ್ವೀಟ್​ ಮಾಡಿದ್ದಾರೆ.

ಮಾಹಿತಿ ನೀಡಿದ ಔರಂಗಾಬಾದ್​ ಎಸ್​ಪಿ:

ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಔರಂಗಾಬಾದ್​ ಎಸ್​ಪಿ ಮೋಕ್ಷದಾ ಪಾಟೀಲ್

ಇಂದು ಬೆಳಗ್ಗೆ 5:15ರ ವೇಳೆ ನಡೆದ ದುರ್ಘಟನೆಯಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಇಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ ಎಂದು ಔರಂಗಾಬಾದ್​ ಎಸ್​ಪಿ ಮೋಕ್ಷದಾ​​ ಪಾಟೀಲ್​ ತಿಳಿಸಿದ್ದಾರೆ.

Last Updated : May 8, 2020, 9:55 AM IST

ABOUT THE AUTHOR

...view details