ಕರ್ನಾಟಕ

karnataka

By

Published : Mar 31, 2019, 1:43 PM IST

ETV Bharat / bharat

ಅಮೇಥಿ ಜತೆ ವಯನಾಡಿನಲ್ಲೂ ಸ್ಪರ್ಧೆ: ಕೇರಳ ಕಡೆ ಮುಖ ಮಾಡಿದ್ಯಾಕೆ ರಾಹುಲ್‌ ಗಾಂಧಿ?

ಕೇರಳದ ವಯನಾಡಿನಿಂದ ರಾಹುಲ್​ ಗಾಂಧಿ ಸ್ಪರ್ಧಿಸುತ್ತಿದ್ದಾರೆ ಎಂದು ಕಾಂಗ್ರೆಸ್​ ಇಂದು ಅಧಿಕೃತವಾಗಿ ಘೋಷಿಸಿದೆ.

ಕೇರಳದ ವಯನಾಡಿನಿಂದ ರಾಹುಲ್​ ಗಾಂಧಿ ಸ್ಪರ್ಧೆ

ನವದೆಹಲಿ: ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ತಮ್ಮ ತವರು ಕ್ಷೇತ್ರ ಅಮೇಥಿಯೊಂದಿಗೆ ಕೇರಳದ ವಯನಾಡಿನಿಂದಲೂ ಸ್ಪರ್ಧಿಸುತ್ತಿದ್ದಾರೆ ಎಂದು ಕಾಂಗ್ರೆಸ್​ ಇಂದು ಅಧಿಕೃತವಾಗಿ ಘೋಷಿಸಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾಂಗ್ರೆಸ್​ ನಾಯಕ ಎ.ಕೆ ಆಂಟನಿ, ರಾಹುಲ್​ ಈ ಬಾರಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಆಸಕ್ತಿ ಹೊಂದಿದ್ದಾರೆ. ಅಮೇಥಿಯೊಂದಿಗೆ ಕೇರಳದ ವಯನಾಡಿನಿಂದಲೂ ಅವರು ಸ್ಪರ್ಧಿಸುತ್ತಿದ್ದಾರೆ ಎಂದರು.

ಕೇರಳದ ವಯನಾಡಿನಿಂದ ರಾಹುಲ್​ ಗಾಂಧಿ ಸ್ಪರ್ಧೆ

ಅಮೇಥಿಯಲ್ಲಿ ರಾಹುಲ್​ಗೆ ಸೋಲುವ ಭಯವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪಕ್ಷದ ವಕ್ತಾರ ರಣದೀಪ್​ ಸಿಂಗ್ ಸುರ್ಜೇವಾಲ, ಮೋದಿ ಏಕೆ ಗುಜರಾತ್​ ಹಾಗೂ ವಾರಣಾಸಿಯಲ್ಲಿ ಸ್ಪರ್ಧಿಸುತ್ತಾರೆ? ಗುಜರಾತ್​ನಲ್ಲಿ ಗೆಲ್ಲುವ ವಿಶ್ವಾಸವಿಲ್ಲವೇ? ಇದು ಚಿಕ್ಕ ಮಕ್ಕಳ ಕಾಮೆಂಟ್​ನಂತಿದೆ ಎಂದು ಸ್ಮೃತಿ ಇರಾನಿಗೆ ಟಾಂಗ್ ನೀಡಿದರು.

ಉತ್ತರ ಕೇರಳ ಭಾಗದಲ್ಲಿರುವ ವಯನಾಡು ಕಾಂಗ್ರೆಸ್​ನ ಭದ್ರಕೋಟೆ. ಎಂಐ ಶನವಾಸ್​ ಎಂಬುವರು ಕಳೆದ ಎರಡು ಬಾರಿ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಇವರ ನಿಧನದಿಂದ ಸದ್ಯ ಸ್ಥಾನ ತೆರವಾಗಿದೆ.

ರಾಹುಲ್ ಈ ಬಾರಿ ದಕ್ಷಿಣದತ್ತ ಮುಖಮಾಡಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದ್ದವು. ಕೇರಳದಿಂದ ಅವರು ಸ್ಪರ್ಧಿಸುತ್ತಾರೆ ಎಂದೂ ಹೇಳಲಾಗ್ತಿತ್ತು. ಈ ವೇಳೆ ಕರ್ನಾಟಕದಲ್ಲಿ ಸ್ಪರ್ಧಿಸುವಂತೆ ರಾಜ್ಯದ ಕೈ ನಾಯಕರು ರಾಹುಲ್​ಗೆ ಮುಕ್ತ ಅವಕಾಶವನ್ನೂ ನೀಡಿದ್ದರು. ಆದರೆ, ರಾಹುಲ್​ ಗಾಂಧಿ ಕೇರಳದ ವಯನಾಡ್​ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾರೆ.

ABOUT THE AUTHOR

...view details