ಕರ್ನಾಟಕ

karnataka

ETV Bharat / bharat

ಗಾಯಗೊಂಡ ಪತ್ರಕರ್ತರನ್ನ ಆ್ಯಂಬುಲೆನ್ಸ್​ವರೆಗೂ ಹೊತ್ತೊಯ್ದ ರಾಹುಲ್​​, ಸಾಥ್​​ ನೀಡಿದ ಪ್ರಿಯಾಂಕಾ!

ಬೆಳಗ್ಗೆ ಸಹೋದರಿ ಪ್ರಿಯಾಂಕಾ ಜತೆ ಸೇರಿ ಕೇರಳಕ್ಕೆ ಆಗಮಿಸಿದ್ದ ರಾಗಾ, ನಾಮಪತ್ರ ಸಲ್ಲಿಕೆ ಮಾಡಿ, ಬೃಹತ್​ ರೋಡ್​ ಶೋ ನಡೆಸಿದರು. ಈ ವೇಳೆ ರೋಡ್​​ನಲ್ಲಿ ಅಡ್ಡಲಾಗಿ ಹಾಕಲಾಗಿದ್ದ ಬ್ಯಾರಿಕೇಡ್​ಗೆ ವಾಹನವೊಂದು ಡಿಕ್ಕಿ ಹೊಡೆದಿದೆ.

By

Published : Apr 4, 2019, 11:56 PM IST

ರಾಹುಲ್​ ಗಾಂಧಿ

ವಯನಾಡು(ಕೇರಳ):ಐಎಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಇಂದು ಕೇರಳದ ವಯನಾಡಿನಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದಾದ ಬಳಿಕ ಅನೇಕ ಕಾರ್ಯಕರ್ತರೊಂದಿಗೆ ರೋಡ್​ ಶೋ ನಡೆಸುತ್ತಿದ್ದ ವೇಳೆ ಗಾಯಗೊಂಡಿದ್ದ ಮೂವರು ಪತ್ರಕರ್ತರನ್ನ ಆಸ್ಪತ್ರೆಗೆ ದಾಖಲು ಮಾಡಿ ಮಾನವೀಯತೆ ಮೆರೆದಿದ್ದಾರೆ.

ಬೆಳಗ್ಗೆ ಸಹೋದರಿ ಪ್ರಿಯಾಂಕಾ ಜತೆ ಸೇರಿ ಕೇರಳಕ್ಕೆ ಆಗಮಿಸಿದ್ದ ರಾಗಾ, ನಾಮಪತ್ರ ಸಲ್ಲಿಕೆ ಮಾಡಿ, ಬೃಹತ್​ ರೋಡ್​ ಶೋ ನಡೆಸಿದರು. ಈ ವೇಳೆ ರೋಡ್​​ನಲ್ಲಿ ಅಡ್ಡಲಾಗಿ ಹಾಕಲಾಗಿದ್ದ ಬ್ಯಾರಿಕೇಡ್​ಗೆ ವಾಹನವೊಂದು ಡಿಕ್ಕಿ ಹೊಡೆದಿದೆ. ಈ ವೇಳೆ ವರದಿಗಾಗಿ ಆಗಮಿಸಿದ್ದ ಪತ್ರಕರ್ತರು ಕೆಳಗೆ ಬಿದ್ದು ಗಾಯಗೊಂಡಿದ್ದರು. ತಕ್ಷಣ ಕೆಳಗಿಳಿದ ಬಂದ ರಾಹುಲ್​ ಹಾಗೂ ಸಹೋದರಿ ಪ್ರಿಯಾಂಕಾ ಅವರಿಗೆ ಸಹಾಯ ಮಾಡಿದ್ದಾರೆ.

ರಾಹುಲ್​ ಗಾಂಧಿ ಗಾಯಾಳುಗಳನ್ನ ಸ್ಟ್ರಚ್ಚರ್​ ಮೇಲೆ ಮಲಗಿಸಿ ಆ್ಯಂಬುಲೆನ್ಸ್​ವರೆಗೆ ಕರೆದುಕೊಂಡು ಹೋದರೆ, ಪ್ರಿಯಾಂಕಾ ಪತ್ರಕರ್ತನೋರ್ವನ ಶೋ ಕೈಯಲ್ಲಿ ಹಿಡಿದುಕೊಂಡು ಹೋಗಿದ್ದಾರೆ. ಇನ್ನು ಕಳೆದ ಮಾರ್ಚ್​ 27ರಂದು ಅಪಘಾತವಾಗಿದ್ದ ರಾಹುಲ್​ ಗಾಂಧಿ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು.

ABOUT THE AUTHOR

...view details