ಕರ್ನಾಟಕ

karnataka

ETV Bharat / bharat

ಮಾನನಷ್ಟ ಮೊಕದ್ದಮೆ ಕೇಸ್​​ನಲ್ಲಿ ಜಾಮೀನು: ನನ್ನ ಹೋರಾಟ 10 ಪಟ್ಟು ಹೆಚ್ಚಾಗಲಿದೆ ಎಂದ ರಾಹುಲ್​ - undefined

ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆಗೆ ಬಿಜೆಪಿ - ಆರ್​ಎಸ್​ಎಸ್​ ಸಿದ್ದಾಂತವೇ ಕಾರಣ ಎಂದು ರಾಹುಲ್ ಆರೋಪಿಸಿದ್ದಕ್ಕೆ ಆರ್​ಎಸ್​ಎಸ್​ ಕಾರ್ಯಕರ್ತರೊಬ್ಬರು ಮಾನನಷ್ಟ ಮೊಕದಮೆ ಹೂಡಿದ್ದರು. ಪ್ರಕರಣ ಕುರಿತಾಗಿ ಇಂದು ಮುಂಬೈ ಕೋರ್ಟ್​ಗೆ ಹಾಜರಾಗಿ, ವಿಚಾರಣೆ ಎದುರಿಸಿದ ರಾಹುಲ್​, ಈ ಕೇಸ್​​ನಲ್ಲಿ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ರಾಹುಲ್ ಗಾಂಧಿ

By

Published : Jul 4, 2019, 11:43 AM IST

Updated : Jul 4, 2019, 12:24 PM IST

ನವದೆಹಲಿ:ಬಿಜೆಪಿ - ಆರ್​ಎಸ್​ಎಸ್​ ಟೀಕಿಸಿ ಮಾತನಾಡಿ, ಮಾನನಷ್ಟ ಮೊಕದಮೆ ಎದುರಿಸುತ್ತಿದ್ದ ರಾಹುಲ್ ಗಾಂಧಿ ಅವರಿಗೆ ರಿಲೀಫ್​ ಸಿಕ್ಕಿದೆ. ಈ ಸಂಬಂಧ ಅವರಿಗೆ ಮುಂಬೈ ಸ್ಥಳೀಯ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶ ಮಾಡಿದ್ದಾರೆ.

ರಾಹುಲ್​ ಗಾಂಧಿಗೆ ಜಾಮೀನು

ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆಗೆ ಬಿಜೆಪಿ-ಆರ್​ಎಸ್​ಎಸ್​ ಸಿದ್ಧಾಂತವೇ ಕಾರಣ ಎಂದು ರಾಹುಲ್ ಆರೋಪಿಸಿದ್ದಕ್ಕೆ ಆರ್​ಎಸ್​ಎಸ್​ ಕಾರ್ಯಕರ್ತರೊಬ್ಬರು ಮಾನನಷ್ಟ ಮೊಕದಮೆ ಹೂಡಿದ್ದರು. ಪ್ರಕರಣ ಕುರಿತಾಗಿ ಇಂದು ಮುಂಬೈ ಕೋರ್ಟ್​ಗೆ ಹಾಜರಾಗಿ, ವಿಚಾರಣೆ ಎದುರಿಸಿದ ರಾಹುಲ್​, ನಿರೀಕ್ಷಣಾ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ರಾಹುಲ್​ ಅವರಿಗೆ 15 ಸಾವಿರ ರೂ. (ಭದ್ರತೆ )ಸೆಕ್ಯೂರಿಟ್​ ಪಡೆದು ಜಾಮೀನು ಮಂಜೂರು ಮಾಡಿದೆ. ಮಾಜಿ ಸಂಸದ ಏಕ್​​ನಾಥ ಗಾಯಕ್ವಾಡ್​​ ರಾಹುಲ್​​ಗೆ ಸ್ಯೂರಿಟಿ ಹಾಕಿದ್ದಾರೆ.

ಕೋರ್ಟ್​ನಿಂದ ಹೊರಬಂದ ನಂತರ ಮಾಧ್ಯಮಗಳ ಜತೆ ಮಾತನಾಡಿ ರಾಹುಲ್​, ನನ್ನ ಮೇಲೆ ಇಂತಹ ದಾಳಿ ನಡೆದಂತೆಲ್ಲಾ ಹೆಚ್ಚು ಮಜಾ ಬರುತ್ತಿದೆ. ಆದರೂ ನಾನು ಬಡವರು, ರೈತರು, ಶ್ರಮಜೀವಿಗಳ ಜತೆಯಲ್ಲೇ ಇದ್ದು, ನಿರಂತರವಾಗಿ ಹೋರಾಡುತ್ತೇನೆ. ನನ್ನ ಮುಂದಿನ ಹೋರಾಟ ಇನ್ನೂ 10 ಪಟ್ಟು ಹೆಚ್ಚಾಗಲಿದೆ ಎಂದು ಹೇಳಿದರು.

Last Updated : Jul 4, 2019, 12:24 PM IST

For All Latest Updates

TAGGED:

ABOUT THE AUTHOR

...view details