ಕರ್ನಾಟಕ

karnataka

ETV Bharat / bharat

ಮತ್ತೆ ರಫೇಲ್​​​​ ಬಗ್ಗೆ ಧ್ವನಿ ಎತ್ತಿದ ರಾಹುಲ್ ಗಾಂಧಿ​​: ಬಿಜೆಪಿ ವಿರುದ್ಧ ವಾಗ್ದಾಳಿ

ರಫೇಲ್​ ಯುದ್ಧ ವಿಮಾನ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಎಲ್ಲಾ ಭಾರತೀಯರಿಗೆ ತಿಳಿದಿದೆ. ಈ ಒಪ್ಪಂದದಲ್ಲಿ ಪ್ರಧಾನಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳೇ ಸ್ಪಷ್ಟವಾಗಿ ಬರೆದಿದ್ದಾರೆ ಎಂದು ಮುಂಬೈನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

By

Published : Oct 13, 2019, 10:57 PM IST

ಮತ್ತೆ ರಫೇಲ್​ ಬಗ್ಗೆ ಧ್ವನಿ ಎತ್ತಿದ ರಾಗಾ

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಿಮಿತ್ತ ರಾಜ್ಯದಲ್ಲಿ ಭರ್ಜರಿಯಾಗಿ ಪ್ರಚಾರ ಸಭೆ ನಡೆಸುತ್ತಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಮತ್ತೆ ರಫೇಲ್​ ಕುರಿತು ಧ್ವನಿಯೆತ್ತಿದ್ದಾರೆ.

ರಫೇಲ್​ ಯುದ್ಧ ವಿಮಾನ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಇಡೀ ಭಾರತಕ್ಕೆ ತಿಳಿದಿದೆ. ಈ ಒಪ್ಪಂದದಲ್ಲಿ ಪ್ರಧಾನಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳೇ ಸ್ಪಷ್ಟವಾಗಿ ಬರೆದಿದ್ದಾರೆ. ಹೀಗಾಗಿಯೇ ಇದರಲ್ಲಿ ಲೋಪವಿದೆ. ರಫೇಲ್ ಎಂಬ ಹೆಸರು ಅವರ ಮನಸ್ಸಿಗೆ ನೋವುಂಟುಮಾಡುತ್ತದೆ. ಇದೇ ಕಾರಣದಿಂದಾಗಿ ರಾಜನಾಥ್ ಸಿಂಗ್ ಅವರು ಫ್ರಾನ್ಸ್​ಗೆ ಹೋಗಿ ರಫೇಲ್ ಯುದ್ಧ ವಿಮಾನ ಸ್ವೀಕಾರ ಮಾಡಿದರು ಎಂದು ರಾಗಾ ಆರೋಪಿಸಿದ್ದಾರೆ.

ಮತ್ತೆ ರಫೇಲ್​ ಬಗ್ಗೆ ಧ್ವನಿ ಎತ್ತಿದ ರಾಗಾ

ಸತ್ಯದಿಂದ ಯಾರೊಬ್ಬರೂ ಪಾರಾಗಲು ಸಾಧ್ಯವಿಲ್ಲ. ಅದು ನರೇಂದ್ರ ಮೋದಿ ಇರಲಿ, ಅಮಿತ್​ ಶಾ ಇರಲಿ ಅಥವಾ ಯಾವೊಬ್ಬ ನಾಯಕನೇ ಇರಲಿ. ಸತ್ಯದಿಂದ ದೂರ ಓಡಿ ಹೋಗಲು ಸಾಧ್ಯವಿಲ್ಲ. ಅದು ಅವರನ್ನು ಹಿಡಿದಿಡುತ್ತದೆ ಎಂದು ಹೇಳಿದರು.

For All Latest Updates

TAGGED:

ABOUT THE AUTHOR

...view details