ಕರ್ನಾಟಕ

karnataka

ETV Bharat / bharat

ಪ್ರಿಯಾಂಕ ಬಂಧನ ಕಾನೂನು ಬಾಹಿರ: ಯೋಗಿ ಸರ್ಕಾರದ ವಿರುದ್ಧ ರಾಹುಲ್​ ಕಿಡಿ - undefined

ಸೋನ್​​ಭದ್ರ ಘಟನೆಯ ಸಂತ್ರಸ್ತರನ್ನು ಭೇಟಿಯಾಗಲು ತೆರಳಿದ ಪ್ರಿಯಾಂಕಾ ಗಾಂಧಿಯನ್ನು ಪೊಲೀಸರು ಬಂಧಿಸಿರುವುದನ್ನು ಖಂಡಿಸಿ ರಾಹುಲ್ ಗಾಂಧಿ ಯುಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಯೋಗಿ ಸರ್ಕಾರದ ವಿರುದ್ಧ ರಾಹುಲ್​ ಕಿಡಿ

By

Published : Jul 19, 2019, 8:10 PM IST

ಉತ್ತರಪ್ರದೇಶ: ಸೋನ್​​ಭದ್ರ ಘಟನೆಯ ಸಂತ್ರಸ್ತರನ್ನು ಭೇಟಿಯಾಗಲು ತೆರಳಿದ ಪ್ರಿಯಾಂಕಾ ಗಾಂಧಿಯನ್ನು ಪೊಲೀಸರು ಬಂಧಿಸಿದ್ದಾರೆ. ಯೋಗಿ ಆದಿತ್ಯನಾಥ್​ ಸರ್ಕಾರ ಅಧಿಕಾರ ದುರ್ಬಳಕೆಮಾಡಿಕೊಂಡುಪ್ರಿಯಾಂಕಾರನ್ನ ಬಂಧಿಸಿದೆ ಎಂದು ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಆರೋಪಿಸಿದ್ದಾರೆ.

ಸೋನ್​​ಭದ್ರನಲ್ಲಿತಮ್ಮ ಸ್ವಂತ ಭೂಮಿಯನ್ನು ಖಾಲಿ ಮಾಡಲು ನಿರಾಕರಿಸಿದ್ದಕ್ಕಾಗಿ 10 ಆದಿವಾಸಿ ರೈತರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಹತ್ಯೆಗೀಡಾದವರ ಕುಟುಂಬದವರನ್ನು ಭೇಟಿಯಾಗಲು ಪ್ರಿಯಾಂಕಾ ತೆರಳಿದ್ದರು. ಆದರೆ ಪ್ರಿಯಾಂಕಾ ಅವರನ್ನು ತಡೆದು ಯೋಗಿ ಆದಿತ್ಯನಾಥ್​ ಸರ್ಕಾರ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ಹಾಗೂ ಈ ಘಟನೆ ಯುಪಿಯಲ್ಲಿ ಹೆಚ್ಚುತ್ತಿರುವ ಅಭದ್ರತೆಯನ್ನು ತೋರಿಸುತ್ತದೆ ಎಂದು ರಾಹುಲ್​ ಕಿಡಿಕಾರಿದ್ದಾರೆ. ಈ ಬಂಧನ ಕಾನೂನುಬಾಹಿರ ಮತ್ತು ಗೊಂದಲದ ಸಂಗತಿಯಾಗಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಧರಣಿಗೆ ಕುಳಿತ ಪ್ರಿಯಾಂಕ

ಇನ್ನು ಧರಣಿಗೆ ಕುಳಿತಾಗ ಮಾತನಾಡಿದ ಪ್ರಿಯಾಂಕ ಗಾಂಧಿ ಅವರು, ಗುಂಡಿನ ದಾಳಿಗೆ ಬಲಿಯಾದ ರೈತ ಸಂತ್ರಸ್ಥ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ನಾನು ಶಾಂತಿಯುತವಾಗಿ ಹೋಗುತ್ತಿದ್ದೆ. ನನ್ನನ್ನು ಯಾವ ಆದೇಶದಡಿಯಲ್ಲಿ ತಡೆದಿದ್ದಾರೆ ಎಂಬುದನ್ನು ನಾನು ತಿಳಿಯಲು ಬಯಸುತ್ತೇನೆ ಎಂದಿದ್ದಾರೆ.

For All Latest Updates

TAGGED:

ABOUT THE AUTHOR

...view details