ಕರ್ನಾಟಕ

karnataka

By

Published : Dec 18, 2020, 11:03 PM IST

ETV Bharat / bharat

ಹಥ್ರಾಸ್ ಪ್ರಕರಣ: ನಾಲ್ವರ ವಿರುದ್ಧ ದೋಷಾರೋಪಣೆ ಸಲ್ಲಿಸಿದ ಸಿಬಿಐ: ಸಿಎಂ ಯೋಗಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ

ಸಿಬಿಐ ಚಾರ್ಜ್‌ಶೀಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡರು, ಮತ್ತೊಮ್ಮೆ ಸತ್ಯವು ಮೇಲುಗೈ ಸಾಧಿಸಿದೆ. ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ ಎಂದರು.

Priyanka Gandhi
ಪ್ರಿಯಾಂಕಾ

ನವದೆಹಲಿ:ಹಥ್ರಾಸ್ ಪ್ರಕರಣದ ನಾಲ್ವರು ಆರೋಪಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ದೋಷಾರೋಪಣೆ ಮತ್ತು ಕೊಲೆ ಆರೋಪದ ಚಾರ್ಜ್​ಶಿಟ್ ಸಲ್ಲಿಸಿದ ಕೆಲವೇ ಗಂಟೆಗಳ ನಂತರ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಹರಿಹಾಯ್ದುರು. 'ಬಲಿಪಶುವಿನ ಘನತೆಯನ್ನು ನಿರಾಕರಿಸಲು ಯಾವುದೇ ಅಡೆತಡೆಯಿಲ್ಲ' ಎಂದಿದ್ದಾರೆ.

ಸಿಬಿಐ ಚಾರ್ಜ್‌ಶೀಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡರು, ಮತ್ತೊಮ್ಮೆ ಸತ್ಯವು ಮೇಲುಗೈ ಸಾಧಿಸಿದೆ. ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ ಎಂದರು.

ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಈ ಬೆಳವಣಿಗೆಯು ಉತ್ತರ ಪ್ರದೇಶದ ಆದಿತ್ಯನಾಥ್ ಸರ್ಕಾರ, ಯುಪಿ ಪೊಲೀಸ್, ಎಡಿಜಿಯ ಕಾನೂನು ಸುವ್ಯವಸ್ಥೆ, ಹಥ್ರಾಸ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ರಾಜ್ಯ ಆಡಳಿತದ ಹಿರಿಯ ಕಾರ್ಯಕರ್ತರ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಪ್ರಿಯಾಂಕಾ ವಾದ್ರಾ ಹೇಳಿದ್ದಾರೆ.

ಟಿಎಂಸಿಯಲ್ಲಿ ಸುವೇಂದು ಅಧಿಕಾರಿ ನಿರ್ಗಮನ ತಂದ ಬಿರುಗಾಳಿ: ಅಮಿತ್​ ಶಾ ರ‍್ಯಾಲಿಯತ್ತ ಎಲ್ಲರ ಚಿತ್ತ!

ಜೀವನ್ಮರಣದಲ್ಲಿ ಬಲಿಪಶು ಘನತೆ ನಿರಾಕರಿಸಲು ರಾಜ್ಯವು ಯಾವುದೇ ಅಡೆತಡೆಯಿಲ್ಲ. ಮಧ್ಯರಾತ್ರಿಯಲ್ಲಿ ಅವಳ ಕುಟುಂಬದ ಒಪ್ಪಿಗೆಯಿಲ್ಲದೇ ಅಂತ್ಯಕ್ರಿಯೆ ಮಾಡಲಾಯಿತು. ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಆಡಳಿತಕಾರಿಗಳು ಅತ್ಯಾಚಾರವನ್ನು ಸಂಪೂರ್ಣವಾಗಿ ನಿರಾಕರಿಸಿದರು. ಆಕೆಯ ಕುಟುಂಬಸ್ಥರನ್ನು ಬೆದರಿಸಿದರು ಎಂದು ಆರೋಪಿಸಿದ್ದಾರೆ.

ಸೆಪ್ಟೆಂಬರ್ 14ರಂದು 19 ವರ್ಷದ ಬಾಲಕಿಯನ್ನು ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ಎಸಗಿ ನಂತರ ಕೊಲೆ ಮಾಡಲಾಯಿತು. ಸೆಪ್ಟೆಂಬರ್ 30ರಂದು ರಾತ್ರಿ ವೇಳೆ ಸಂತ್ರಸ್ತೆಯ ಅಂತ್ಯಕ್ರಿಯೆ ಮಾಡಲಾಯಿತು. ಸ್ಥಳೀಯ ಪೊಲೀಸರು ಅವಳ ಕೊನೆಯ ವಿಧಿಗಳನ್ನು ಸಹ ಮಾಡಲು ಅನುಮತಿಸಲಿಲ್ಲ ಎಂದು ಆಕೆಯ ಕುಟುಂಬ ಆರೋಪಿಸಿತ್ತು.

ABOUT THE AUTHOR

...view details