ಕರ್ನಾಟಕ

karnataka

By

Published : Dec 28, 2019, 8:45 PM IST

ETV Bharat / bharat

ಯುಪಿ ಪೊಲೀಸರ ಮೇಲೆ ಪ್ರಿಯಾಂಕಾ ಗಾಂಧಿ ಗಂಭೀರ ಆರೋಪ!

ತಾನು ಮಾಜಿ ಐಪಿಎಸ್​ ಅಧಿಕಾರಿ ಎಸ್​ಆರ್​ ದರಪುರಿ ಅವರ ಕುಟುಂಬಸ್ಥರನ್ನು ಭೇಟಿಯಾಗಲು ಹೋಗುತ್ತಿರುವಾಗ ಮಹಿಳಾ ಪೊಲೀಸ್​ ಸಿಬ್ಬಂದಿ ನನ್ನನ್ನು ತಡೆದು, ಹೊಡೆದು ತಳ್ಳಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರ ಮೇಲೆ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಪ್ರಿಯಾಂಕಾ ಗಾಂಧಿ ಗಂಭೀರ ಆರೋಪ, Priyanka Gandhi accuses UP Police
ಪ್ರಿಯಾಂಕಾ ಗಾಂಧಿ ಗಂಭೀರ ಆರೋಪ

ಲಖನೌ(ಉತ್ತರ ಪ್ರದೇಶ): ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ, ಉತ್ತರ ಪ್ರದೇಶ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ತಾನು ಮಾಜಿ ಐಪಿಎಸ್​ ಅಧಿಕಾರಿ ಎಸ್​ಆರ್​ ದರಪುರಿ ಅವರ ಕುಟುಂಬಸ್ಥರನ್ನು ಭೇಟಿಯಾಗಲು ಹೋಗುತ್ತಿರುವಾಗ ಮಹಿಳಾ ಪೊಲೀಸ್​ ಸಿಬ್ಬಂದಿ ನನ್ನನ್ನು ತಡೆದು, ಹೊಡೆದು ತಳ್ಳಿದ್ದಾರೆ. ಆ ವೇಳೆ ನಾನು ಕೆಳಗೆ ಬಿದ್ದೆ ಎಂದು ಆರೋಪಿಸಿದ್ದಾರೆ.

ಬಳಿಕ ನಾನು ಪಕ್ಷದ ಕಾರ್ಯಕರ್ತನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗಲೂ ಪೊಲೀಸರು ನನ್ನನ್ನು ಸುತ್ತುವರಿದರು. ಅದಾದ ಬಳಿಕ ನಾನು ನಡೆದುಕೊಂಡೇ ದರಪುರಿ ಕುಟುಂಬಸ್ಥರ ಮನೆ ಸೇರಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

For All Latest Updates

ABOUT THE AUTHOR

...view details