ನವದೆಹಲಿ: ಜನತಾ ಕರ್ಫ್ಯೂನಿಂದಾಗಿ ದೇಶ ಸ್ತಬ್ಧವಾಗಿದೆ. ಜನರು ಮನೆಗಳಿಂದ ಹೊರಬರದೇ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಬೆಂಬಲ ನೀಡುತ್ತಿದ್ದಾರೆ. ಜನತಾ ಕರ್ಫ್ಯೂಗೆ ಆರಿನ್ ಕ್ಯಾಪಿಟಲ್ ಅಧ್ಯಕ್ಷ ಹಾಗೂ ''ಅಕ್ಷಯ ಪಾತ್ರ''ದ ಸಹ ಸಂಸ್ಥಾಪಕ ಟಿ.ವಿ. ಮೋಹನ್ದಾಸ್ ಪೈ ಬೆಂಬಲ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮೋಹನ್ದಾಸ್ ಪೈ ''ನಾವು ಜನತಾ ಕರ್ಫ್ಯೂ ಆದ ಇಂದು ಮನೆಯಲ್ಲಿಯೇ ಇದ್ದೇವೆ. ಈ ಸಮಯದಲ್ಲಿ ಕೆಲ ವಸ್ತುಗಳನ್ನು ಖರೀದಿ ಮಾಡಬೇಕೆಂದರೆ ದಯವಿಟ್ಟು ಡಿಜಿಟಲ್ ಪೇಮೆಂಟ್ ಅನ್ನು ಬಳಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಸುರಕ್ಷಿತವಾಗಿರಿ'' ಎಂದು ಮನವಿ ಮಾಡಿದ್ದಾರೆ.
ಜನತಾ ಕರ್ಫ್ಯೂನಂದು ಡಿಜಿಟಲ್ ಪೇಮೆಂಟ್ ಮಾಡಿ ಸುರಕ್ಷಿತವಾಗಿರಿ: ಪ್ರಧಾನಿ - akshaya patra
ಜನತಾ ಕರ್ಫ್ಯೂನಿಂದಾಗಿ ದೇಶದ ಬಹುಪಾಲು ನಗರಗಳು ಮೌನವಾಗಿವೆ. ಈ ವೇಳೆ ಡಿಜಿಟಲ್ ಪೇಮೆಂಟ್ಗಳನ್ನು ಉಪಯೋಗಿಸಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಪ್ರಧಾನಿ ಮೋದಿ ಟ್ವೀಟ್ನಲ್ಲಿ ಮನವಿ ಮಾಡಿದ್ದಾರೆ.
![ಜನತಾ ಕರ್ಫ್ಯೂನಂದು ಡಿಜಿಟಲ್ ಪೇಮೆಂಟ್ ಮಾಡಿ ಸುರಕ್ಷಿತವಾಗಿರಿ: ಪ್ರಧಾನಿ digital payments](https://etvbharatimages.akamaized.net/etvbharat/prod-images/768-512-6501103-thumbnail-3x2-rajesh.jpg)
ಡಿಜಿಟಲ್ ಪೇಮೆಂಟ್ಸ್
ಮೋಹನ್ ದಾಸ್ ಪೈ ಅವರ ಟ್ವೀಟ್ಗೆ ರಿಟ್ವೀಟಿಸಿರುವ ಪ್ರಧಾನಿ ಮೋದಿ ಡಿಜಿಟಲ್ ಪೇಮೆಂಟ್ಗಳನ್ನು ಅಳವಡಿಸಿಕೊಳ್ಳುವಂತೆ ಮತ್ತೆ ಮನವಿ ಮಾಡಿದ್ದಾರೆ. ಜೊತೆಗೆ ಇಂದು ಡಿಜಿಟಲ್ ಪೇಮೆಂಟ್ ಬಗ್ಗೆ ಟ್ವೀಟ್ ಮಾಡಿರುವ ಕೆಲವರ ಟ್ವಿಟ್ಗಳನ್ನು ಉಲ್ಲೇಖಿಸಿದ್ದಾರೆ.