ಕೇರಳ:ಮಲಯಾಳಂ ಸಾಹಿತ್ಯಕ್ಕೆ ಅಪೂರ್ವ ಕೊಡುಗೆ ನೀಡಿದ ಪ್ರಸಿದ್ಧ ಮಲಯಾಳಂ ಕವಿ ಅಕ್ಕಿತಂ ಅಚ್ಯುತನ್ ನಂಬೂತಿರಿ ಅವರಿಗೆ 55ನೇ ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಮಲಯಾಳಂ ಕವಿ ಅಕ್ಕಿತಂ ಮುಡಿಗೆ 55ನೇ ಜ್ಞಾನಪೀಠ ಪ್ರಶಸ್ತಿಯ ಗರಿ - 2019 ಜ್ಞಾನಪೀಠ ಪ್ರಶಸ್ತಿ ಲೇಟೆಸ್ಟ್ ಸುದ್ದಿ
ಮಲಯಾಳಂನಲ್ಲಿ 43 ಕ್ಕೂ ಹೆಚ್ಚು ಕೃತಿಗಳನ್ನು ಬರೆದು, ಮಲಯಾಳಂ ಸಾಹಿತ್ಯಕ್ಕೆ ಅಪೂರ್ವ ಕೊಡುಗೆ ನೀಡಿದ ಪ್ರಸಿದ್ಧ ಮಲಯಾಳಂ ಕವಿ ಅಕ್ಕಿತಂ ಅಚ್ಯುತನ್ ನಂಬೂದಿರಿ ಅವರಿಗೆ 55ನೇ ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
![ಮಲಯಾಳಂ ಕವಿ ಅಕ್ಕಿತಂ ಮುಡಿಗೆ 55ನೇ ಜ್ಞಾನಪೀಠ ಪ್ರಶಸ್ತಿಯ ಗರಿ Jnanpith award](https://etvbharatimages.akamaized.net/etvbharat/prod-images/768-512-5216296-thumbnail-3x2-megha.jpg)
ತಮ್ಮ 93ನೇ ವಯಸ್ಸಿನಲ್ಲಿ ಅವರಿಗೆ ಈ ಪ್ರಶಸ್ತಿ ಅರಸಿ ಬಂದಿದೆ. ಪಾಲಕ್ಕಾಡ್ ಮೂಲದ ಅಕ್ಕಿತಂ, ಮಲಯಾಳಂನಲ್ಲಿ 43 ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಅಕ್ಕಿತಂ ಅಚ್ಯುತನ್ ನಂಬೂದಿರಿ, ಇವರು ಜ್ಞಾನಪೀಠ ಪ್ರಶಸ್ತಿ ಪಡೆದ 6ನೇ ಮಲಯಾಳಂ ಸಾಹಿತಿಯಾಗಿದ್ದಾರೆ. ಕವಿ ಜಿ.ಶಂಕರ ಕುರುಪ್, ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಮಲಯಾಳಂ ಸಾಹಿತಿಯಾಗಿದ್ದು, ತಕಜಿ, ಎಸ್.ಕೆ. ಪೊಟ್ಟೆಕಾಡ್, ಎಂ.ಟಿ. ವಾಸುದೇವನ್ ನಾಯರ್, ಒಎನ್ವಿ ಕುರುಪ್ ನಂತರದವರಾಗಿದ್ದಾರೆ.
ತಮ್ಮ ಪತ್ನಿ ದಿವಂಗತ ಶ್ರೀಮತಿ ಶ್ರೀದೇವಿ, ನನ್ನ ಸಾಧನೆಗೆ ಸ್ಫೂರ್ತಿ. ನಾನು ಬರೆದದ್ದೆಲ್ಲವೂ ನಿಜ ಎಂಬ ಅಭಿಪ್ರಾಯ ನನ್ನಲ್ಲಿ ಎಂದಿಗೂ ಬರಲಿಲ್ಲ. ಮಲಯಾಳಂನಲ್ಲಿ ನನಗಿಂತಲೂ ಶ್ರೇಷ್ಠ ಕವಿಗಳಿದ್ದಾರೆ. ಇದೀಗ ಜ್ಞಾನಪೀಠ ಪ್ರಶಸ್ತಿ ಪಡೆಯುವ ಸರದಿ ನನಗೆ ಒಲಿದು ಬಂದಿದೆ ಎಂದು ಅಕ್ಕಿತಂ ಹೇಳಿದರು.